ಚೆನ್ನೈಯಿಂದ 500 ಕಿಲೋ ಮೀಟರ್ ದೂರದ ಮಧುರೈಯಲ್ಲಿ ಅವರು ಕಳೆದ ರಾತ್ರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಜಯಲಲಿತಾ ಅವರು ಇಡ್ಲಿ ತಿಂದರು, ಜನರು ಅವರನ್ನು ಭೇಟಿ ಮಾಡಿದರು ಎಂದೆಲ್ಲ ನಾವು ಸುಳ್ಳು ಹೇಳುತ್ತಿದ್ದೆವು. ಆದರೆ ವಾಸ್ತವ ಬೇರೆಯೇ ಆಗಿತ್ತು. ನಾವು ಯಾರೂ ಅವರನ್ನು ಭೇಟಿ ಮಾಡುತ್ತಿರಲಿಲ್ಲ. ಅಂದು ಸುಳ್ಳು ಹೇಳಿದ್ದಕ್ಕೆ ಈಗ ಜನರ ಬಳಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.