ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯ ಮತ್ತು ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಅವರನ್ನು ಆರು ವರ್ಷ ಕಾಲ ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮುಕುಲ್ ರಾಯ್ ಅವರನ್ನು ಆರು ವರ್ಷ ಅಮಾನತು ಮಾಡಿದ್ದೇವೆ ಎಂದು ಟಿಎಂಸಿ ಕಾರ್ಯದರ್ಶಿ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
"ಕೆಲ ದಿನಗಳಿಂದ ಪಕ್ಷವನ್ನು ದುರ್ಬಲಗೊಳಿಸಲು ರಾಯ್ ಪ್ರಯತ್ನಿಸುತ್ತಿದ್ದರು. ಪಕ್ಷದ ಶಿಸ್ತು ಸಮಿತಿಯು ಈ ಕುರಿತಂತೆ ಚರ್ಚಿಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗೆ ರಾಯ್ ಅವರನ್ನು ಶಿಕ್ಷಿಸಲು ಶಿಫಾರಸು ಮಾದಿತು" ಎಂದು ಅವರು ಹೇಳಿದರು.