ಪಂಡಿತ್ ದೀನ ದಯಾಳ ಉಪಾಧ್ಯಾಯ ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಜನ್ಮಶತಮಾನೋತ್ಸವ ಕಾರ್ಯಕ್ರಮ "ಭಾರತ್ ಗೀತ್ ಮಾಲಾ" ದಲ್ಲಿ ಸಾಂಸ್ಕೃತಿಕ ರಾಯಭಾರಿ, ಗಾಯಕರಾದ ರಾಜೇಶ್ ಕೃಷ್ಣನ್, ಶಶಿಕಲಾ, ಅತಿಶಯ್ ಜೈನ್, ರಾಜ್ಯ ಕಲಾ ತಂಡದ ನಿರ್ದೇಶನ, ನಿರ್ವಹಣೆ ವಹಿಸಿದ್ದ ಸ್ವಾತಿ ಚಂದ್ರಶೇಖರ್, ಪೂರ್ಣಿಮಾ, ನರಹರಿ ಹಾಡಿದ "ಈ ಮಣ್ಣು ನಮ್ಮದು... ಗೀತೆ ಹಾಗೂ ಕರ್ನಾಟಕದ ಯಕ್ಷಗಾನ, ಡೊಳ್ಳುಕುಣಿತ ಕಲಾವಿದರ ಪ್ರದರ್ಶನ, ಸ್ನೇಹ ಆಖಿರಾ ಸ್ಟುಡಿಯೋ ನೃತ್ಯ ತಂಡದ ಸಮಕಾಲೀನ ನೃತ್ಯ ಪ್ರದರ್ಶನ ದಕ್ಷಿಣ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿತ್ತು. ಮಹಿಳಾ ವೀರಗಾಸೆ ಕಾರ್ಯಕ್ರಮದ ವಿಶೇಷವಾಗಿತ್ತು.