ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ ಇರುವ ಪಾದಚಾರಿಗಳ ಮೇಲ್ಸೇತುವೆ ದುರ್ಬಲವಾಗಿದೆ ಎಂದು 2015 ರಲ್ಲೇ ಕೇಂದ್ರ ರೈಲ್ವೆ ಹೇಳಿತ್ತು. ಸ್ಥಳೀಯರೂ ಸಹ ಇಂತಹ ಅಪಘಾತ ಎಂದಾದರೂ ಒಂದು ದಿನ ನಡೆಯುವುದು ನಿಶ್ಚಿತ ಎಂಬ ಆತಂಕದಲ್ಲಿಯೇ ಇದ್ದರು. "ಪ್ರತಿದಿನ ಈ ಮೇಲ್ಸೇತುವೆ ಮೇಲೆ ನಡೆದು ಹೋಗುವವರು ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಿತ್ತು. ಜನ ಸಂಚಾರ ಹೆಚ್ಚಿದ್ದ ಸಂದರ್ಭದಲ್ಲಿ ಮೇಲ್ಸೇತುವೆ ಮೇಲೆ ನಡೆದು ಹೋಗುವುದು ಯುದ್ಧ ಮಾದರಿಯ ಪರಿಸ್ಥಿತಿಯಂತೆ ಇರುತ್ತಿತ್ತು ಎಂದು ಮೇಲ್ಸೇತುವೆ ದುರಂತ ನಡೆದ ಪ್ರದೇಶದ ಸ್ಥಳೀಯರಾದ ಅರುಣ್ ತಿವಾರಿ ಹೇಳಿದ್ದಾರೆ.