38 ಭಾರತೀಯರ ಮೃತ ದೇಹವನ್ನು ಭಾರತಕ್ಕೆ ವಾಪಸ್ ತರಲು ಇರಾಕ್ ಗೆ ತೆರಳಿದ್ದ ಕೇಂದ್ರ ಸಚಿವ ವಿ.ಕೆ ಸಿಂಗ್, ನಕಲಿ ಏಜೆಂಟ್ ಗಳ ಮೂಲಕ ವಿದೇಶಕ್ಕೆ ತೆರಳಬೇಡಿ ಎಂಬ ಜಾಗೃತಿ ಮೂಡಿಸಲು 2014 ರಲ್ಲಿ ಭಾರತ ಸರ್ಕಾರ ಅಭಿಯಾನ ಕೈಗೊಂಡಿತ್ತು. ನಾಪತ್ತೆಯಾಗಿದ್ದ 40 ಭಾರತೀಯರ ಬಗ್ಗೆ ರಾಯಭಾರಿ ಕಚೇರಿಯಲ್ಲಿ ದಾಖಲೆಯೇ ಇರಲಿಲ್ಲ. ಏಕೆಂದರೆ ಆ 40 ಜನರು ನಕಲಿ ಏಜೆಂಟ್ ಗಳ ಮೂಲಕ ಇರಾಕ್ ಗೆ ತೆರಳಿದ್ದರು, ಒಂದು ವೇಳೆ ಭಾರತೀಯ ರಾಯಭಾರಿ ಕಚೇರಿಯಲ್ಲಿ ಈ 40 ಜನರ ಬಗ್ಗೆ ಮಾಹಿತಿ ಇದ್ದು ಅಪಾಯದಲ್ಲಿ ಸಿಲುಕಿದ್ದು ತಿಳಿದಿದ್ದರೆ ಅಪಾಯದಿಂದ ರಕ್ಷಿಸುತ್ತಿತ್ತು ಎಂದು ವಿಕೆ ಸಿಂಗ್ ಹೇಳಿದ್ದಾರೆ.