ನನ್ನ ಆತ್ಮಹತ್ಯೆಗೆ ದೇಶ ಒಡೆಯುವ ಶಕ್ತಿಗಳೇ ಕಾರಣ: ಆರ್ ಎಸ್ಎಸ್ ಕಾರ್ಯಕರ್ತ

ದೇಶದಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರದಿಂದ ಬೇಸತ್ತು ಆರ್ ಎಸ್ಎಸ್ ಕಾರ್ಯಕರ್ತನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ರಾಜಸ್ಥಾನದ ಆರ್ ಎಸ್ಎಸ್ ಹೇಳಿದೆ.
ಆರ್ ಎಸ್ಎಸ್
ಆರ್ ಎಸ್ಎಸ್
ಜೈಪುರ: ದೇಶದಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರದಿಂದ ಬೇಸತ್ತು ಆರ್ ಎಸ್ಎಸ್ ಕಾರ್ಯಕರ್ತನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ರಾಜಸ್ಥಾನದ ಆರ್ ಎಸ್ಎಸ್ ಹೇಳಿದೆ. 
ಸಾರ್ವಜನಿಕವಾಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅಗರ್ವಾಲ್ ಎಂಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಯುವಕರಿಗೆ ಪತ್ರ ಬರೆದಿದ್ದ ಅಗರ್ವಾಲ್, ದೇಶಕ್ಕಾಗಿ ಒಟ್ಟಾಗಿ ನಿಲ್ಲುವಂತೆ ಯುವಕರಿಗೆ ಕರೆ ನೀಡಿದ್ದಾರೆ.  ತನ್ನ ಆತ್ಮಹತ್ಯೆಗೆ ದೇಶವನ್ನು ಜಾತಿಯ ಆಧಾರದಲ್ಲಿ ಒಡೆಯುವ ಶಕ್ತಿಗಳೇ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 
ಏ.02 ರಂದು ದಲಿತ ಸಂಘಟನೆಗಳಿಂದ ಕರೆ ನೀಡಲಾಗಿದ್ದ ಭಾರತ್ ಬಂದ್ ನಿಂದ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ಅಗರ್ವಾಲ್ ಮನನೊಂದಿದ್ದರು ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com