ನನ್ನ ಮಾಜಿ ಚುನಾವಣಾ ಏಜೆಂಟ್ ನ್ನು ಬಿಜೆಪಿ ಕೋಮುವಾದಿಯನ್ನಾಗಿಸಿದೆ: ಗುಲಾಂ ನಬಿ ಆಜಾದ್

ಬಿಜೆಪಿ ನನ್ನ ಮಾಜಿ ಚುನಾವಣಾ ಏಜೆಂಟ್ ನ್ನು ಕೋಮುವಾದಿಯನ್ನಾಗಿಸಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್
ನವದೆಹಲಿ: ಕಥುವಾ ನಲ್ಲಿ ನಡೆದಿರುವ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಬಿಜೆಪಿ ತಮ್ಮ ಮಾಜಿ ಚುನಾವಣಾ ಏಜೆಂಟ್ ನ್ನು ಕೋಮುವಾದಿಯನ್ನಾಗಿಸಿದೆ ಎಂದು ಆರೋಪಿಸಿದ್ದಾರೆ.  
ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ದಾಖಲಿಸಿರುವ ಎಫ್ಐಆರ್ ಗೆ ಬಾರ್ ಕೌನ್ಸಿಲ್ ನಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಾರ್ ಕೌನ್ಸಿಲ್ ಆರೋಪಿಯೋರ್ವನ ಪರವಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಎಫ್ಐ ಆರ್ ನ್ನು ವಿರೋಧಿಸಿರುವ ಆರೋಪ ಗುಲಾಂ ನಬಿ ಆಜಾದ್ ಅವರ ಮಾಜಿ ಚುನಾವಣಾ ಏಜೆಂಟ್ ಬಿಎಸ್ ಸ್ಲಾಥಿಯಾ ವಿರುದ್ಧವೂ ಕೇಳಿಬಂದಿದ್ದು, ಸ್ಲಾಥಿಯಾ ಅವರನ್ನು ಬಿಜೆಪಿ ಕೋಮುವಾದಿಯನ್ನಾಗಿಸಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ಕಥುವಾ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸ್ಲಾಥಿಯಾ ಆಗ್ರಹಿಸಿದ್ದಾರೆ. ಸ್ಲಾಥಿಯಾ ಅವರು ತಮಗೆ ಕಥುವಾ ಅತ್ಯಾಚಾರ ಸಂತ್ರಸ್ತೆಯ ಪರವಾಗಿ ವಾದ ಮಾಡಬಾರದೆಂದು ಬೆದರಿಕೆ ಹಾಕಿದ್ದರು ಎಂದು ಜಮ್ಮುವಿನ ವಕೀಲರಾದ ಡಿಎಸ್ ರಜ್ವತ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com