ಪಾಕಿಸ್ತಾನ ಪ್ರವಾಸದಲ್ಲಿ ಸುಮಾರು 1800 ಸಿಖ್ ಯಾತ್ರಿಕರಿಗೆ ಭಾರತೀಯ ಹೈಕಮಿಷನ್ ಅಥವಾ ಶಿಷ್ಟಾಚಾರ ತಂಡದ ಜತೆ ಸಂಪರ್ಕ ಏರ್ಪಡಿಸುವುದು ಎಲ್ಲೆಡೆ ಚಾಲ್ತಿಯಲ್ಲಿರುವ ನಿಯಮ. ಅವರಿಗೆ ಅಗತ್ಯವಿರುವ ವೈದ್ಯಕೀಯ ಅಥವಾ ಕೌಟುಂಬಿಕ ಸಹಾಯ ಒದಗಿಸುವುದು ದೂತಾವಾಸದ ಕರ್ತವ್ಯವೂ ಆಗಿರುತ್ತದೆ. ಹಾಗಿದ್ದರೂ ಈ ವರ್ಷ ಸಿಖ್ ಯಾತ್ರಿಕರಿಗೆ ಭಾರತೀಯ ರಾಯಭಾರ ಕಚೇರಿಯ ಸಂಪರ್ಕದ ಅವಕಾಶವನ್ನು ಪಾಕ್ ನಿರಾಕರಿಸಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.