"ಪ್ರತಿದಿನ ಮಧ್ಯಾಹ್ನ ಸುಮಾರು 5,000 ಭಕ್ತರಿಗೆ ನಾವು ಪ್ರಸಾದ ವಿತರಿಸಿದ್ದೇವೆ.ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಲಿದ್ದು 7,000 ಮಂದಿ ಪ್ರಸಾದ ಸ್ವೀಕಾರದಲ್ಲಿ ಭಾಗವಹಿಸಲಿದ್ದಾರೆ. ದೇವಾಲಯದ ಆವರಣದಿಂದ ಹೊರಗಿರುವ ಅನ್ನಲಕ್ಷ್ಮಿ ಹಾಲ್ ನಲ್ಲಿ ಹಿಂದೂಗಳಲ್ಲದವರು ಸಹ ಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಬಾಗವಹಿಸಲು ಅವಕಾಶ ನೀಡಿ ಆಡಳಿತ ಮಂಡಳಿ ತೀರ್ಮಾನಿಸಿದೆ. ಇದು ಉತ್ತಮ ತೀರ್ಮಾನವಾಗಿದೆ. ದೇವಾಲಯದ ತಂತ್ರಿಗಳು ಸಹ ಇದಕ್ಕೆ ಸಮ್ಮತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.