ನಾಟಕ ಮಾಡುವುದನ್ನು ನಿಲ್ಲಿಸಿ: ಪ್ರತಿಭಟನಾಕಾರರ ವಿರುದ್ಧ ಹರಿಹಾಯ್ದ ಯೋಗಿ ಆದಿತ್ಯನಾಥ್

ಕಾವಲುರಹಿತ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ ರೈಲಿಗೆ ಶಾಲಾ ವಾಹನವೊಂದು ಡಿಕ್ಕಿ ಹೊಡೆದು 13 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ...
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಕುಶಿನಗರ: ಕಾವಲುರಹಿತ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ ರೈಲಿಗೆ ಶಾಲಾ ವಾಹನವೊಂದು ಡಿಕ್ಕಿ ಹೊಡೆದು 13 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕುಶಿನಗರದಲ್ಲಿ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಭಟನಾಕಾರರ ಕೋಪಕ್ಕೆ ಗುರಿಯಾಗಬೇಕಾಯಿತು.
ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯೋಗಿ ಆದಿತ್ಯನಾಥ್ ಅನುಸರಿಸಿದ ಕ್ರಮ ಎಲ್ಲರ ಹುಬ್ಬೇರುವಂತೆ ಮಾಡಿದೆ. ಘೋಷಣೆ ಕೂಗುವುದನ್ನು ಹಾಗೂ ನಾಟಕ ಮಾಡುವುದನ್ನು  ನಿಲ್ಲಿಸಿ ಎಂದು  ಮೈಕ್ ನಲ್ಲಿ ಯೋಗಿ ಆದಿತ್ಯನಾಥ್ ಜೋರಾಗಿ ಹೇಳಿದ್ದಾರೆ.
ಮೃತ ಮಕ್ಕಳಿಗೆ ಅನುಕಂಪ ಹಾಗೂ ಸಹಾನುಭೂತಿ ತೋರಲು ನಾನಿಲ್ಲಿ ಬಂದಿದ್ದೇನೆ, ನಿಮ್ಮ ನಾಟಕ ನಿಲ್ಲಿಸಿ ಎಂದು ಏರು ಧ್ವನಿಯಲ್ಲಿ ಹೇಳಿದಾಗ ಕೋಪೊದ್ರಿಕ್ತ ಪ್ರತಿಭಟನಾಕಾರರು ತಲೆ ತಗ್ಗಿಸಿ ನಿಲ್ಲಲು ನಿರಾಕರಿಸಿದರು. ಮೃತ ಮಕ್ಕಳ ಕುಟುಂಬ ವರ್ಗದವರಿಗೆ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ ಪರಿಹಾರ ಘೋಷಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com