1974ರವರೆಗೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ರಾಜ್ಯಪಾಲರು ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದರು.
ಆದಾಗ್ಯೂ, ಕರುಣಾನಿಧಿ ಅವರು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರಿಗೆ ಪತ್ರ ಬರೆದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಬೇಕೆಂದು ಬೇಡಿಕೆ ಹಾಕಿದರು.
ಅದರಂತೆ 1974 ಆಗಸ್ಟ್ 15 ರಂದು ಮೊದಲ ಬಾರಿಗೆ ಸೆಂಟ್ ಜಾರ್ಜ್ ಕೋಟೆ ಮೇಲಿಂದ ಕರುಣಾನಿಧಿ ರಾಷ್ಟ್ರ ಧ್ವಜ ಹಾರಿಸಿದರು.