ಚೆನ್ನೈ: ಐದು ದಶಕಗಳ ಕಾಲ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷರಾಗಿ ನಾಲ್ಕು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಎಂ ಕರುಣಾನಿಧಿ ಯುಗಾಂತ್ಯವಾಗಿದ್ದು, ಅವರ ನಂತರ ಪಕ್ಷದಲ್ಲಿ ಮತ್ತೆ ಉತ್ತರಾಧಿಕಾರಿ ಕಲಹ ಆರಂಭವಾಗುತ್ತಾ ಅಥವಾ ಕಲೈನಾರ್ ಜೀವಿತಾವಧಿಯಲ್ಲಿ ಉತ್ತರಾಧಿಕಾರಿಯಾಗಿ ಬಿಂಬಿತವಾಗಿದ್ದ ಎಂ ಕೆ ಸ್ಟಾಲಿನ್ ಅವರೇ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆಯೇ? ಎಂಬ ಪ್ರಶ್ನೆ ಈಗ ಲಕ್ಷಾಂತರ ಕಾರ್ಯಕರ್ತರನ್ನು ಕಾಡುತ್ತಿದೆ.