ಹಂದಿ, ದನದ ಮಾಂಸ ತಿನ್ನುತ್ತಿದ್ದ ಜವಹರ್ ಲಾಲ್ ನೆಹರು ಪಂಡಿತ್ ಆಗಲು ಹೇಗೆ ಸಾಧ್ಯ: ಬಿಜೆಪಿ ಶಾಸಕ

ಗೋಮಾಂಸ ಮತ್ತು ಹಂದಿಮಾಂಸವನ್ನು ತಿನ್ನುತ್ತಿದ್ದ ದೇಶದ ಪ್ರಥಮ ಪ್ರಧಾನಿ ಜವಹಾರ್‌ ಲಾಲ್‌ ನೆಹರು ಅವರು ಪಂಡಿತರಾಗಲು ಹೇಗೆ ಸಾಧ್ಯ ಎಂದು ಬಿಜೆಪಿ ...
ಜ್ಞಾನ್‌ ದೇವ್‌ ಅಹುಜಾ
ಜ್ಞಾನ್‌ ದೇವ್‌ ಅಹುಜಾ
Updated on
ನವದೆಹಲಿ: 'ಗೋಮಾಂಸ ಮತ್ತು ಹಂದಿಮಾಂಸವನ್ನು ತಿನ್ನುತ್ತಿದ್ದ ದೇಶದ ಪ್ರಥಮ ಪ್ರಧಾನಿ ಜವಹಾರ್‌ ಲಾಲ್‌ ನೆಹರು ಅವರು ಪಂಡಿತರಾಗಲು ಹೇಗೆ ಸಾಧ್ಯ ಎಂದು ಬಿಜೆಪಿ ಶಾಸಕ ಜ್ಞಾನ್‌ ದೇವ್‌ ಅಹುಜಾ ಪ್ರಶ್ನಿಸಿದ್ದಾರೆ. 
'ನೆಹರು ಪಂಡಿರಲ್ಲವೇ ಅಲ್ಲ. ಆ ಪೂರ್ವ ಪ್ರತ್ಯಯವನ್ನು ಕಾಂಗ್ರೆಸ್‌ ಪಕ್ಷ ಅವರ ಹೆಸರಿನಲ್ಲಿ ಸೇರಿಸಿದ್ದು ಎಂದು ರಾಜಸ್ಥಾನದ ಅಲ್ವಾರ್‌ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್‌ ದೇವ್‌ ಹೇಳಿದ್ದಾರೆ. 
'ರಾಹುಲ್‌ ಗಾಂಧಿ ಎಂದಿಗೂ ಅಜ್ಜಿ ಇಂದಿರಾ ಗಾಂಧಿ ಅವರೊಂದಿಗೆ ದೇಗುಲಗಳಿಗೆ ಭೇಟಿ ನೀಡಿಲ್ಲ. ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿಕೆ ಸುಳ್ಳು . ಅದನ್ನು ನಿಜ ಮಾಡಿದಲ್ಲಿ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ ,ನಿಜವಾಗಿದ್ದಲ್ಲಿ ಸಚಿನ್‌ ಪೈಲಟ್‌ ರಾಜಕೀಯ ಕ್ಷೇತ್ರ ಬಿಡಬೇಕು' ಎಂದು ಸವಾಲು ಹಾಕಿದ್ದಾರೆ. 
ನೆಹರು ಹಾಗೂ ಇಂದಿರಾಗಾಂಧಿ ಕುಟುಂಬದ ಬಗ್ಗೆ ಸದಾ ವಾಗ್ದಾಳಿ ನಡೆಸುವ ಅಹುಜಾ , ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com