ಅಳಗಿರಿ ಅವರು ಒಂದು ಕಾಲಕ್ಕೆ ಪಕ್ಷದಲ್ಲಿ ಪ್ರಬಲ ನಾಯಕರಾಗಿದ್ದವರು. ಪಕ್ಷದ ಉಸ್ತುವಾರಿ, ಕಾರ್ಯಕರ್ತರನ್ನು ನಿಯಂತ್ರಿಸುತ್ತಿದ್ದ ಅವರು, ಮುದುರೈ ಪ್ರಾಂತ್ಯದಲ್ಲಿ ಪಕ್ಷವನ್ನು ಡಿಎಂಕೆಯನ್ನು ಶಾಲಿಯಾಗಿ ಸಂಘಟಿಸಿದ್ದರು. 2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು, ಚುನಾವಣೆಯಲ್ಲಿ ಗೆದ್ದು ಯುಪಿಎ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಪಕ್ಷದಲ್ಲಿ ನಿರ್ಲಕ್ಷಿಸಲ್ಪಟ್ಟ ಅವರು ಹಂತ ಹಂತವಾಗಿ ತಂದೆ ಹಾಗೂ ಡಿಎಂಕೆಯಿಂದ ದೂರವಾಗಿದ್ದರು.