ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಯೋಧರು ನೀಡಿದ ಗುಂಡಿನ ದಾಳಿಯ ಪ್ರತ್ಯುತ್ತರಕ್ಕೆ ಇಬ್ಬರು ಪಾಕ್ ಯೋಧರು ಬಲಿಯಾಗಿದ್ದಾರೆ.
ಪಾಕ್ ಟ್ರೂಪರ್ ಗಳು ಗುಂಡೇಟಿಕೆ ಬಲಿಯಾಗಿರುವುದನ್ನು ಸ್ವತಃ ಸೇನೆಯ ರಕ್ಷಣಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಟ್ಯಾಂಗ್ಧರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿದ್ದರು.