ಅಪ್ಪನ ಕೊನೆಯ ಆಸೆ ಈಡೇರಿಸಿ ಎಂದು ಮುಖ್ಯಮಂತ್ರಿಗಳ ಕೈ ಹಿಡಿದು ಬೇಡಿಕೊಂಡಿದ್ದೆ; ಎಂ ಕೆ ಸ್ಟಾಲಿನ್

ಡಿಎಂಕೆ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಗೆ ಪಕ್ಷದ ವತಿಯಿಂದ ಮಂಗಳವಾರ ಗೌರವಪೂರ್ವಕ ...
ಎಂ ಕೆ ಸ್ಟಾಲಿನ್
ಎಂ ಕೆ ಸ್ಟಾಲಿನ್
ಚೆನ್ನೈ: ಡಿಎಂಕೆ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಗೆ ಪಕ್ಷದ ವತಿಯಿಂದ ಮಂಗಳವಾರ ಗೌರವಪೂರ್ವಕ ನಮನ ಸಲ್ಲಿಸಲಾಯಿತು. ದೇಶ ಮತ್ತು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆ ಮತ್ತು ಕೊಡುಗೆಗಳನ್ನು ಸ್ಮರಿಸಲಾಯಿತು.
ಪಕ್ಷದ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಅದರಲ್ಲಿ ಕರುಣಾನಿಧಿಯವರ ಕೊಡುಗೆ, ಕೆಲಸಗಳನ್ನು ಸ್ಮರಿಸಲಾಯಿತು. ಸಾಮಾಜಿಕ ನ್ಯಾಯ, ಕೈಗಾರಿಕೆಗಳ ಅಭಿವೃದ್ಧಿ, ಸ್ಥಳೀಯ ಸ್ವಾಯತ್ತತೆ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅವರ ಪ್ರಾಬಲ್ಯಗಳನ್ನು ನಾಯಕರು ಕೊಂಡಾಡಿದರು. ಅಗಲಿದ ಗಣ್ಯನಿಗೆ ಎರಡು ನಿಮಿಷಗಳ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರ ಪುತ್ರ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್, ಪಕ್ಷ ಉತ್ತಮ ನಾಯಕನನ್ನು ಕಳೆದುಕೊಂಡಿದ್ದರೆ ನಾನು ನಾಯಕ ಮತ್ತು ಅಪ್ಪ ಎರಡನ್ನೂ ಕಳೆದುಕೊಂಡಿದ್ದೇನೆ. ಅವರು ತಮ್ಮ ಉಸಿರಿನ ಕೊನೆ ಹಂತದಲ್ಲಿದ್ದಾಗ ಅವರ ಇಚ್ಛೆಯಂತೆ ಅವರನ್ನು ಮರೀನಾ ಬೀಚ್ ನಲ್ಲಿ ಸಮಾಧಿ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳ ಕೈ ಹಿಡಿದು ಬೇಡಿಕೊಂಡಿದ್ದೆ. ಆದರೆ ಸರ್ಕಾರ ಅವಕಾಶ ನೀಡಿರಲಿಲ್ಲ ಎಂದರು.
ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಎಂ ಕರುಣಾನಿಧಿಯವರು ಆಗಸ್ಟ್ 7ರಂದು ನಿಧನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com