ಪಕ್ಷದ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಅದರಲ್ಲಿ ಕರುಣಾನಿಧಿಯವರ ಕೊಡುಗೆ, ಕೆಲಸಗಳನ್ನು ಸ್ಮರಿಸಲಾಯಿತು. ಸಾಮಾಜಿಕ ನ್ಯಾಯ, ಕೈಗಾರಿಕೆಗಳ ಅಭಿವೃದ್ಧಿ, ಸ್ಥಳೀಯ ಸ್ವಾಯತ್ತತೆ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅವರ ಪ್ರಾಬಲ್ಯಗಳನ್ನು ನಾಯಕರು ಕೊಂಡಾಡಿದರು. ಅಗಲಿದ ಗಣ್ಯನಿಗೆ ಎರಡು ನಿಮಿಷಗಳ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು.