ರೈಫಲ್‏ಮ್ಯಾನ್ ಔರಂಗಜೆಬ್, ಮೇಜರ್ ಆದಿತ್ಯ ಕುಮಾರ್ ಗೆ ಶೌರ್ಯ ಚಕ್ರ ಪುರಸ್ಕಾರ

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರೈಫಲ್ ಮ್ಯಾನ್ ಔರಂಗಜೆಬ್ ಮತ್ತು ಮೇಜರ್ ಆದಿತ್ಯ ಕುಮಾರ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ
ರೈಫಲ್ ಮ್ಯಾನ್  ಔರಂಗಜೆಬ್
ರೈಫಲ್ ಮ್ಯಾನ್ ಔರಂಗಜೆಬ್
Updated on

ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ  ಮರಣೋತ್ತರವಾಗಿ ರೈಫಲ್ ಮ್ಯಾನ್  ಔರಂಗಜೆಬ್    ಮತ್ತು ಮೇಜರ್ ಆದಿತ್ಯ ಕುಮಾರ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ

ಈ ವರ್ಷದ ಜೂನ್ ತಿಂಗಳಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ರೈಫಲ್‏ಮ್ಯಾನ್ ಔರಂಗಜೆಬ್  ಉಗ್ರರಿಂದ ಅಪಹರಣಕ್ಕೊಳಗಾಗಿ  ಹತ್ಯೆಗೀಡಾಗಿದ್ದರು. 44 ವರ್ಷದ ಔರಂಗಜೆಬ್ ರಂಜಾನ್ ಹಬ್ಬದ ಆಚರಣೆಗಾಗಿ ತಮ್ಮ ಮನೆಗೆ ಹೋಗಿದ್ದಾಗ ಉಗ್ರರಿಂದ ಅಪಹರಣಕ್ಕೊಳಗಾಗಿದ್ದರು.

ಈ ಮಧ್ಯೆ  ಮೇಜರ್ ಆದಿತ್ಯ ಕುಮಾರ್ ಈ ವರ್ಷದ ಜನವರಿಯಲ್ಲಿ ಬೆಳಕಿಗೆ ಬಂದಿದ್ದರು. ಶೂಪಿಯಾನ್ ಜಿಲ್ಲೆಯ ಗನೊವ್ ಪೊರಾ ಗ್ರಾಮದ ಬಳಿ ಕಲ್ಲು ತೂರಾಟ  ಸಂಭವಿಸಿದಾಗ ಆದಿತ್ಯ ಕುಮಾರ್   ಗುಂಡಿನ ದಾಳಿ ನಡೆಸಿದಾಗ ಮೂವರು ನಾಗರಿಕರು ಸಾವನ್ನಪ್ಪಿದ್ದರು.

ನಂತರ ಜಮ್ಮು-ಕಾಶ್ಮೀರ ಸರ್ಕಾರ ತನಿಖೆಗೆ ಆದೇಶಿಸಿ ಸೆಕ್ಷನ್ 302 ( ಹತ್ಯೆ )  ಮತ್ತು 307 ( ಹತ್ಯೆಗೆ ಯತ್ನ )  ಆಧಾರದ ಮೇಲೆ ಎಫ್ ಐಆರ್ ದಾಖಲಿಸಿತ್ತು. ಇದನ್ನು  ಮೇಜರ್ ಆದಿತ್ಯ ಅವರ ತಂದೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಎಫ್ ಐಆರ್ ನಲ್ಲಿ ಮೇಜರ್ ಆದಿತ್ಯ   ಕುಮಾರ್ ಹೆಸರು ಇಲ್ಲ ಎಂದು ಸರ್ಕಾರ ಹೇಳಿಕೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com