ರಾಷ್ಟ್ರೀಯತೆ ಬಗ್ಗೆ ನಾವು ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಈ ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಜಾತಿ, ಧರ್ಮ, ಭಾಷೆಗಿಂತ ಮೊದಲು ತಾನು ಒಬ್ಬ ಭಾರತೀಯನೆಂದು ಭಾವಿಸಬೇಕು. ಕೇವಲ ರಾಷ್ಟ್ರಗೀತೆ ಅಥವಾ ವಂದೇ ಮಾತರಂ ಹಾಡುವುದೇ ರಾಷ್ಟ್ರೀಯತೆ ಅಲ್ಲ. ಅವರು ಯೋಚಿಸುವ ರೀತಿಯಲ್ಲಿ ಬದಲಾವಣೆ ತರಬೇಕಾಗಿದೆ. ಪ್ರತಿ ಭಾರತೀಯರಲ್ಲಿಯೂ ರಾಷ್ಟ್ರೀಯತೆಯ ಭಾವವನ್ನು ಹುಟ್ಟುಹಾಕಲು ನಾವು ಶಾಲಾ ಮಟ್ಟದಲ್ಲಿಯೇ ಅದನ್ನು ಆರಂಭಿಸಬೇಕು ಎಂದಿದ್ದಾರೆ.