ನವದೆಹಲಿ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭೋಜನ ಪ್ರಿಯರಾಗಿದ್ದರು.
ವಾಜಪೇಯಿ ಅವರಿಗೆ ಸಿಹಿ ತಿಂಡಿ ಮತ್ತು ಸಿಗಡಿ ಮೀನಿನ ಖಾದ್ಯ, ಮಾಂಸಾಹಾರ ಎಂದರೆ ಅವರಿಗೆ ಪಂಚಪ್ರಾಣ. ಗುಲಾಬ್ ಜಾಮೂನು, ಕುರುಕಲು ತಿಂಡಿ, ಸಿಗಡಿ ಮೀನು, ಕಬಾಬ್ ಗಳನ್ನು ಅವರು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು.
ಇನ್ನು ಅವರು ಎಲ್ಲಿಗೆ ಹೋದರು ಸ್ಥಳೀಯ ತಿಂಡಿ, ತಿನಿಸುಗಳ ರುಚಿ ನೋಡುವ ಹವ್ಯಾಸವಿತ್ತು. ಹೈದರಾಬಾದ್ ಗೆ ಹೋದರೆ ಬಿರಿಯಾನಿ, ಲಖನೌದಲ್ಲಿ ಗಲೋಟಿ ಕಬಾಬ್, ಕೋಲ್ಕತ್ತದಲ್ಲಿ ಪಚ್ಕಾಸ್ ಸವಿಯುತ್ತಿದ್ದರು.
ವಾಜಪೇಯಿ ಅವರು ಸಂಜೆ ವೇಳೆ ಚಾಟ್ ಮಸಾಲಾ, ಪಾನಿಪೂರಿ, ಪಕೋಡ ಮತ್ತು ಜತೆಗೊಂಡು ಕಪ್ ಮಸಾಲಾ ಚಹಾ ಕುಡಿಯುತ್ತಿದ್ದರು.