ವಾಜಪೇಯಿ ಅವರಿಗೆ ಸಿಗಡಿ ಮೀನಿನ ಖಾದ್ಯ ಅಂದ್ರೆ ಪಂಚಪ್ರಾಣ!

ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭೋಜನ ಪ್ರಿಯರಾಗಿದ್ದರು...
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ
Updated on
ನವದೆಹಲಿ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭೋಜನ ಪ್ರಿಯರಾಗಿದ್ದರು.
ವಾಜಪೇಯಿ ಅವರಿಗೆ ಸಿಹಿ ತಿಂಡಿ ಮತ್ತು ಸಿಗಡಿ ಮೀನಿನ ಖಾದ್ಯ, ಮಾಂಸಾಹಾರ ಎಂದರೆ ಅವರಿಗೆ ಪಂಚಪ್ರಾಣ. ಗುಲಾಬ್ ಜಾಮೂನು, ಕುರುಕಲು ತಿಂಡಿ, ಸಿಗಡಿ ಮೀನು, ಕಬಾಬ್ ಗಳನ್ನು ಅವರು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು. 
ಇನ್ನು ಅವರು ಎಲ್ಲಿಗೆ ಹೋದರು ಸ್ಥಳೀಯ ತಿಂಡಿ, ತಿನಿಸುಗಳ ರುಚಿ ನೋಡುವ ಹವ್ಯಾಸವಿತ್ತು. ಹೈದರಾಬಾದ್ ಗೆ ಹೋದರೆ ಬಿರಿಯಾನಿ, ಲಖನೌದಲ್ಲಿ ಗಲೋಟಿ ಕಬಾಬ್, ಕೋಲ್ಕತ್ತದಲ್ಲಿ ಪಚ್ಕಾಸ್ ಸವಿಯುತ್ತಿದ್ದರು. 
ವಾಜಪೇಯಿ ಅವರು ಸಂಜೆ ವೇಳೆ ಚಾಟ್ ಮಸಾಲಾ, ಪಾನಿಪೂರಿ, ಪಕೋಡ ಮತ್ತು ಜತೆಗೊಂಡು ಕಪ್ ಮಸಾಲಾ ಚಹಾ ಕುಡಿಯುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com