ಸ್ವಾತಂತ್ರ್ಯ ದಿನಾಚರಣೆಗೆ ದೇಶಕ್ಕೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ
ಸ್ವಾತಂತ್ರ್ಯ ದಿನಾಚರಣೆಗೆ ದೇಶಕ್ಕೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ

ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ

ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಉಮರ್ ಖಾಲೀದ್ ಮೇಲೆ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ...
Published on
ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಉಮರ್ ಖಾಲೀದ್ ಮೇಲೆ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ದಾಳಿಯ ಹೊಣೆ ಹೊತ್ತಿದ್ದಾರೆ. 
"ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಗಿಫ್ಟ್ ನೀಡಬೇಕಿತ್ತು ಈ ಹಿನ್ನೆಲೆಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹೇಳಿರುವುದು ಕಂಡುಬಂದಿದೆ. ದಾಳಿಯ ಹೊಣೆ ಹೊತ್ತಿರುವ ಇಬ್ಬರು ವ್ಯಕ್ತಿಗಳು ನಾಳೆ ಪೊಲೀಸರೆದುರು ಶರಣಾಗುವುದಾಗಿ ಹೇಳಿದ್ದಾರೆ. 
ಹೊಣೆ ಹೊತ್ತಿರುವ ಇಬ್ಬರನ್ನು ದರ್ವೇಶ್ ಶಾಪುರ್, ನವೀನ್ ದಲಾಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಿಡಿಯೋದಲ್ಲಿರುವ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com