ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಅದೊಂದು ದಿನ, ಚೆನ್ನೈನಲ್ಲಿ ಕಾರ್ಯಕ್ರಮವೊಂದಲ್ಲಿ ಉಪನ್ಯಾಸ ನೀಡುತ್ತಿದ್ದ ಕ್ಷೀಪಣಿ ತಜ್ಞ ಕಲಾಂ ಅವರಿಗೆ ಕರೆ ಮಾಡಿ, ನಾವು ನಿಮ್ಮನ್ನು ರಾಷ್ಟ್ರಪತಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ನೀವು ಸ್ಪರ್ಧಿಸಲು ಒಪ್ಪುವಿರಾ ಎಂದು ಕೇಳಿದ್ದರು. ಆಗ ನನಗೆ ಎರಡು ಗಂಟೆಗಳ ಕಾಲಾವಕಾಶ ಕೊಡಿ ಎಂದು ಕೇಳಿದ್ದ ಅಬ್ದುಲ್ ಕಲಾಂ ಅವರು, ತಮ್ಮ ಸ್ನೇಹಿತರನ್ನು ಸಂಪರ್ಕಿಸಿ ಆಗಬಹುದು ಎಂದು ಹೇಳಿದ್ದರು. ಕಡೆಗೆ ಎನ್.ಡಿ.ಎ. ಸರ್ಕಾರ ಕಲಾಂ ಅವರನ್ನು ತಮ್ಮ ಸ್ಪರ್ಧಿಯನ್ನಾಗಿ ಆಯ್ಕೆ ಮಾಡಿದರೆ, ಎಡಪಕ್ಷಗಳು ಲಕ್ಷ್ಮೀ ಸೆಹಗಲ್ ಅವರನ್ನು ಕಣಕ್ಕಿಳಿಸಿದ್ದವು.