ದೇಶ
ಡಿಎನ್ ಎ ಪರೀಕ್ಷೆ ಮಾಡಿಸದೇ ನೇತಾಜಿ ಚಿತಾಭಸ್ಮ ಒಪ್ಪಿಕೊಳ್ಳಲಾಗದು: ಚಂದ್ರಕುಮಾರ್ ಬೋಸ್
ನೇತಾಜಿ ಅವರ ಚಿತಾಭಸ್ಮದ ಡಿಎನ್ ಎ ಪರೀಕ್ಷೆ ಮಾಡದೇ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ, ಹಾಗೂ ....
ಕೊಲ್ಕೊತಾ: ನೇತಾಜಿ ಅವರ ಚಿತಾಭಸ್ಮದ ಡಿಎನ್ ಎ ಪರೀಕ್ಷೆ ಮಾಡದೇ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ, ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಹೇಳಿದ್ದಾರೆ.
ತಮ್ಮ ತಂದೆಯ ಚಿತಾಭಸ್ಮವನ್ನು ವಾಪಸ್ ಭಾರತಕ್ಕೆ ಕಳುಹಿಸಿಕೊಡುವಂತೆ ಜಪಾನ್ ಸರ್ಕಾರಕ್ಕೆ ನೇತಾಜಿ ಪುತ್ರಿ ಅನಿತಾ ಬೋಸ್ ಕೋರಿದ ಬೆನ್ನಲ್ಲೇ ನೇತಾಜಿ ಅವರ ಮೊಮ್ಮಗ ಈ ರೀತಿ ಹೇಳಿಕೆ ನೀಡಿದ್ದಾರೆ,
ಭಾರತ ದೇಶ ಹಾಗೂ ನೇತಾಜಿ ಕುಟುಂಬದ ಹಲವು ಸದಸ್ಯರಿಗೆ ಚಿತಾಭಸ್ಮ ತರುವುದು ಇಷ್ಟವಿಲ್ಲ, ಡಿಎನ್ ಎ ಪರೀಕ್ಷೆ ಮಾಡಿಸದೇ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ,. ಆ ಚಿತಾಭಸ್ಮ ಅವರದ್ದೆ ಎಂದು ಖಚಿತವಾದರೇ ಮಾತ್ರ ದೇಶಕ್ಕೆ ತರಲು ತರುವುದಾಗಿ ತಿಳಿಸಿದ್ದಾರೆ.