2004ರಿಂದ ಇಲ್ಲಿಯವರೆಗೂ ದೇಶದಲ್ಲಿ ಯಾವುದೇ ಪ್ರಕೃತಿ ವಿಕೋಪದಿಂದಾದ ಹಾನಿಗೆ ವಿದೇಶಿ ನೆರವನ್ನು ಭಾರತ ಪಡೆದಿಲ್ಲ. ಇನ್ನು 2004ಕ್ಕೂ ಹಿಂದೆ ಸಾಕಷ್ಟು ವಿದೇಶಿ ನೆರವು ಪಡೆಯುತ್ತಿತ್ತು. 1991ರ ಉತ್ತರಕಾಶಿಯ ಭೂಕಂಪ, 1993ರ ಲಾತೂರ್ ಭೂಕಂಪ, 2001ರ ಗುಜರಾತ್ ಭೂಕಂಪ, 2002ರ ಪಶ್ಚಿಮ ಬಂಗಾಳದ ಚಂಡಮಾರುತ, 2004ರ ಬಿಹಾರದ ನೆರಹಾನಿ ಹೀಗೆ ಸಾಕಷ್ಟು ಬಾರಿ ಭಾರತ ವಿದೇಶಗಳಿಂದ ನೆರವು ಸ್ವೀಕರಿಸಿತ್ತು. ಅದೇ ರೀತಿ ಸುನಾಮಿಯ ಸಂದರ್ಭದಲ್ಲೂ ಅನೇಕ ದೇಶಗಳು ನೆರವು ನೀಡಲು ಮುಂದೆ ಬಂದವು, ಆದರೆ ಆಗ ಕೇಂದ್ರ ಸರ್ಕಾರ ತನ್ನ ಪ್ರಕೃತಿ ವಿಕೋಪ ನೀತಿಯನ್ನು ಬದಲಿಸಿಕೊಂಡಿತು.