2010 ರಲ್ಲಿ ಎನ್ಆರ್ ಸಿ ಯೋಜನೆ ಪ್ರಾರಂಭವಾಯಿತು. ಯೋಜನೆ ಬಗ್ಗೆ ಅಸಮಾಧಾನ ಉಂಟಾದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು, ನಂತರ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಜಾರಿಗೊಳಿಸಲು ನಾನು ಸಂಪುಟ ಸಮಿತಿ ರಚಿಸಿದ್ದೆ. ಅಕ್ರಮ ಬಾಂಗ್ಲಾ ವಲಸಿಗರ್ನನು ಗುರುತಿಸಲು ನಾವು ಸಿದ್ಧಪಡಿಸಿದ್ದ ವಿಧಾನಗಳನ್ನು ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾ ಬಹುತೇಕ ಒಪ್ಪಿತ್ತು ಎಂದು ತರುಣ್ ಗೊಗೋಯ್ ತಿಳಿಸಿದ್ದಾರೆ.