ಉತ್ತರ ಪ್ರದೇಶ ಹೊತ್ತಿ ಉರಿಯುತ್ತಿದೆ, ಆದರೆ ಯೋಗಿ ಆದಿತ್ಯ ನಾಥ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸ್ವಾಮಿ, 1984 ರಲ್ಲಿ ಸಿಖ್ ವಿರೋಧಿ ದಂಗೆಯಲ್ಲಿ ಇಡಿ ಭಾರತ ಹೊತ್ತಿ ಉರಿಯಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾವಿರಾರು ಮುಗ್ದ ಜನರನ್ನು ವಿಚಾರಣೆ ನಡೆಸದೆ ಜೈಲಿಗೆ ಹಾಕಲಿಲ್ಲವೇ ಎಂದು ಕೇಳಿದ್ದಾರೆ.