ಉತ್ತರ ಪ್ರದೇಶ ಸಿಎಂ ಯಾವಾಗಲೂ ದನಗಳ ಬಗ್ಗೆ ಮಾತಾಡ್ತಾರೆ: ಬುಲಂದಶಹರ್ ಪೊಲೀಸ್ ಅಧಿಕಾರಿಯ ಸಹೋದರಿ

ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ಗೋಹತ್ಯೆ ವದಂತಿಗೆ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಸಹೋದರಿ ಉತ್ತರ ಪ್ರದೇಶ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯಾವಾಗಲೂ ದನಗಳ ಬಗ್ಗೆ ಮಾತಾಡ್ತಾರೆ: ಬುಲಂದಶಹರ್ ಪೊಲೀಸ್ ಅಧಿಕಾರಿಯ ಸಹೋದರಿ
ಉತ್ತರ ಪ್ರದೇಶ ಸಿಎಂ ಯಾವಾಗಲೂ ದನಗಳ ಬಗ್ಗೆ ಮಾತಾಡ್ತಾರೆ: ಬುಲಂದಶಹರ್ ಪೊಲೀಸ್ ಅಧಿಕಾರಿಯ ಸಹೋದರಿ
ಬುಲಂದಶಹರ್: ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ಗೋಹತ್ಯೆ ವದಂತಿಗೆ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಸಹೋದರಿ ಉತ್ತರ ಪ್ರದೇಶ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯ ಸಹೋದರಿ, "ನನ್ನ ಸಹೋದರ ಅಖ್ಲಾಕ್ ಪ್ರಕರಣದ ತನಿಖೆ ನಡೆಸುತ್ತಿದ್ದ, ಆದ್ದರಿಂದಲೇ ಆತನನ್ನು ಹತ್ಯೆ ಮಾಡಲಾಗಿದೆ. ಪೊಲೀಸರೇ ಇದಕ್ಕೆ ಷಡ್ಯಂತ್ರ ರೂಪಿಸಿದ್ದಾರೆ. ನನ್ನ ಸಹೋದರನನ್ನು ಹುತಾತ್ಮ ಎಂದು ಘೋಷಿಸುವಂತೆ ಪೊಲೀಸ್ ಅಧಿಕಾರಿಯ ಸಹೋದರಿ ಆಗ್ರಹಿಸಿದ್ದಾರೆ. 
"ನಮಗೆ ಪರಿಹಾರದ ಹಣ ಬೇಕಿಲ್ಲ ನನ್ನ ಸಹೋದರನನ್ನು ಹುತಾತ್ಮ ಎಂದು ಘೋಷಿಸಿ, ಉತ್ತರ ಪ್ರದೇಶ ಸಿಎಂ ಯಾವಾಗಲೂ ದನಗಳ ಬಗ್ಗೆಯೇ ಮಾತನಾಡುತ್ತಾರೆ, ದನ... ದನ... ದನ... ಎನ್ನುತ್ತಲೇ ಇರುತ್ತಾರೆ ಎಂದು ಪೊಲೀಸ್ ಅಧಿಕಾರಿಯ ಸಹೋದರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com