ದೃಶ್ಯದಲ್ಲಿರುವ ಯುವಕ ಚಿಂಗ್ರಾವತಿ ಗ್ರಾಮದ ಸುಮಿತ್ ಎಂದು ಗುರುತಿಸಲಾಗಿದ್ದು, ಐದು ಯುವಕರ ಗುಂಪಿನೊಂದಿಗೆ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರನ್ನು ಸುತ್ತುವರಿದು, ಅವರ ಗನ್ ಕದ್ದು, ಅವರನ್ನೇ ಶೂಟ್ ಮಾಡುತ್ತಾನೆ. ಇದಕ್ಕು ಮುನ್ನ ಹಿಂಸಾಚಾರದಲ್ಲಿ ತೊಡಗಿದ್ದ ಈ ಯುವಕ, ಪೊಲೀಸರ ಮೇಲೆ ಕಲ್ಲು ತೂರಾಟ ಸಹ ನಡೆಸಿದ್ದ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.