ಅನ್ಯಾಯ, ಸುಳ್ಳಿಗೆ ಸಿಕ್ಕ ಪ್ರತಿಫಲ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯ

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. ಅನ್ಯಾಯ ಮತ್ತು ಸುಳ್ಳಿನ ಸೋಲು ಇದು ...
ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಮುಂಬಯಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. ಅನ್ಯಾಯ ಮತ್ತು ಸುಳ್ಳಿನ ಸೋಲು ಇದು ಎಂದು ಬಣ್ಣಿಸಿದೆ,
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಕರ್ತರು ಗಂಟಲು ಹರಿದು ಕೂಗಿಕೊಂಡರು. ಪ್ರತಿದಿನ ದೇಶದ ಅತ್ಯಂತ ಹಳೇಯ ಪಕ್ಷಕ್ಕೆ ಸಂತಾಪ ಸೂಚಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯನ್ನು ಬಗ್ಗು ಬಡಿದಿದ್ದಾರೆ. ಬಿಜೆಪಿಯ ಈ ಸೋಲು ಅನ್ಯಾಯ ಮತ್ತು ಸುಳ್ಳಿಗೆ ಸಿಕ್ಕ ಪ್ರತಿಫಲ, ಗರ್ವ ಹಾಗೂ ಅಹಂಕಾರ ನುಚ್ಚುನೂರಾಗಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.
ಸೋಲನ್ನು ವಿಧೇಯವಾಗಿ ನಾವು ಒಪ್ಪಿಕೊಳ್ಳುವುದು ನಮ್ಮ ಸಂಸ್ಕೃತಿ, ಆದರೆ 2014 ರ ಲೋಕಸಭೆ ಚುನಾವಣೆ ನಂತರ ಈ ಸಂಸ್ಕೃತಿ ಬದಲಾಯಿತು, ರಾಜಸ್ತಾನ. ಮಧ್ಯಪ್ರದೇಶ ಮತ್ತು ಚತ್ತೀಸಗಡದಲ್ಲಿ ಸ್ಥಾನ ಕಳೆದುಕೊಂಡಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com