ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)

ಅನ್ಯಾಯ, ಸುಳ್ಳಿಗೆ ಸಿಕ್ಕ ಪ್ರತಿಫಲ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯ

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. ಅನ್ಯಾಯ ಮತ್ತು ಸುಳ್ಳಿನ ಸೋಲು ಇದು ...
Published on
ಮುಂಬಯಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. ಅನ್ಯಾಯ ಮತ್ತು ಸುಳ್ಳಿನ ಸೋಲು ಇದು ಎಂದು ಬಣ್ಣಿಸಿದೆ,
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಕರ್ತರು ಗಂಟಲು ಹರಿದು ಕೂಗಿಕೊಂಡರು. ಪ್ರತಿದಿನ ದೇಶದ ಅತ್ಯಂತ ಹಳೇಯ ಪಕ್ಷಕ್ಕೆ ಸಂತಾಪ ಸೂಚಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯನ್ನು ಬಗ್ಗು ಬಡಿದಿದ್ದಾರೆ. ಬಿಜೆಪಿಯ ಈ ಸೋಲು ಅನ್ಯಾಯ ಮತ್ತು ಸುಳ್ಳಿಗೆ ಸಿಕ್ಕ ಪ್ರತಿಫಲ, ಗರ್ವ ಹಾಗೂ ಅಹಂಕಾರ ನುಚ್ಚುನೂರಾಗಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.
ಸೋಲನ್ನು ವಿಧೇಯವಾಗಿ ನಾವು ಒಪ್ಪಿಕೊಳ್ಳುವುದು ನಮ್ಮ ಸಂಸ್ಕೃತಿ, ಆದರೆ 2014 ರ ಲೋಕಸಭೆ ಚುನಾವಣೆ ನಂತರ ಈ ಸಂಸ್ಕೃತಿ ಬದಲಾಯಿತು, ರಾಜಸ್ತಾನ. ಮಧ್ಯಪ್ರದೇಶ ಮತ್ತು ಚತ್ತೀಸಗಡದಲ್ಲಿ ಸ್ಥಾನ ಕಳೆದುಕೊಂಡಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com