ಹಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ವಿಜಯ್ ಮಲ್ಯಗೆ ಸರ್ಕಾರಿ ಸ್ವಾಮ್ಯದ ಸಿಕೋಮ್ ಮೂಲಕವೇ ಸಾಲ ನೀಡಿತ್ತು.ಕಳೆದ ನಲವತ್ತು ವರ್ಷಗಳಿಂದ ಮಲ್ಯ ಅದಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ದಾರೆ.ಆದರೆ ಅವರು ವೈಮಾನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಸಮಸ್ಯೆಗಳು ಎದುರಾಗಿದೆ. ಸಾಲ ಮರುಪಾವತಿ ಸಾಧ್ಯವಾಗಿಲ್ಲ, ಹಾಗೆಂದು ಕಳೆದ ನಲವತ್ತು ವರ್ಷಗಳಿಂದ ಬಡ್ಡಿ ಕಟ್ಟುತ್ತಾ ಬಂದ ಮಲ್ಯರನ್ನು ಒಮ್ಮೆ ಸಾಲ ತೀರಿಸಿಲ್ಲ ಎಂಬ ನೆಪವೊಡ್ಡಿ ಏಕಾಏಕಿ ಅವರನ್ನು "ವಂಚಕ" ಎನ್ನುತ್ತೀರಾ? ಇದು ತಪ್ಪು ಎಂದು ಗಡ್ಕರಿ ಅಭಿಪ್ರಾಯಪಟ್ಟರು.