ರಾಮಾಯಣದ ಎದುರು ಗೂಗಲ್ ವಿಫಲವಾಗಿದೆ. ಸರ್ಚ್ ಇಂಜಿನ್ ಹೇಳುವುದಕ್ಕಿಂತ ಧಾರ್ಮಿಕ ಗ್ರಂಥಗಳಲ್ಲಿನ ಜ್ಞಾನ ದೊಡ್ಡದಿದೆ. ತಾವು ಆಕಸ್ಮಿಕ ಹಿಂದೂಗಳೆಂದು ಹೇಳಿಕೊಂಡಿದ್ದವರು ಈಗ ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆಯಲು ಜನ ಗೋತ್ರ, ಜನಿವಾರ ತೋರಿಸಲು ಪ್ರಾರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭ ಮೇಳದಲ್ಲಿ ಎಲ್ಲಾ ಜಾತಿಯವರೂ ಪಾಲ್ಗೊಳ್ಳುತ್ತಾರೆ ಇದು ಧಾರ್ಮಿಕ ಭವ್ಯತೆಯ ಸಂಕೇತ. ವೇದಗಳಲ್ಲಿನ ಹಲವು ಭಾಗಗಳನ್ನು ದಲಿತ ಋಷಿಗಳೇ ರಚಿಸಿದ್ದರು, ವಾಲ್ಮೀಕಿ ರಾಮನನ್ನು ಸಂದರ್ಶಿಸಿದ ಸಂತ, ಅದರೆ ಈ ಸಮುದಾಯದವರು ತಾರತಮ್ಯ ಎದುರಿಸಿದ್ದರು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.