ಪ್ರಯಾಣಿಕರೊಬ್ಬರ ತುರ್ತು ಚಿಕಿತ್ಸೆಗಾಗಿ ಭುವನೇಶ್ವರದಲ್ಲಿ ಕೊಲ್ಕತ್ತಾ- ಬೆಂಗಳೂರು ವಿಮಾನ ಲ್ಯಾಂಡ್

ಪ್ರಯಾಣಿಕರೊಬ್ಬರಿಗೆ ತುರ್ತು ಚಿಕಿತ್ಸೆ ಕಾರಣದಿಂದಾಗಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವೊಂದು ಇಲ್ಲಿನ ಬಿಜಿ ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಭುವನೇಶ್ವರ್ : ಪ್ರಯಾಣಿಕರೊಬ್ಬರಿಗೆ  ತುರ್ತು ಚಿಕಿತ್ಸೆ ಕಾರಣದಿಂದಾಗಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವೊಂದು  ಇಲ್ಲಿನ ಬಿಜಿ ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

32 ವರ್ಷದ ವ್ಯಕ್ತಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯ ಇದುದ್ದರಿಂದ ಇಂಡಿಗೊ ವಿಮಾನ (822 ) ಬೆಳಗ್ಗೆ 11-15 ರ ಸುಮಾರಿನಲ್ಲಿ ಲ್ಯಾಂಡ್ ಆಗಿದ್ದು,  ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವೈದ್ಯರು ಎಲ್ಲಾ ರೀತಿಯ ನೆರವು ನೀಡಿದ್ದಾರೆ.

ಆತನ ಹೃದಯ ಬಡಿತ ನಿಂತಿದ್ದು, ದೇಹ ತಣ್ಣಗಾಗಿದೆ. ಆತ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸುತ್ತಿಲ್ಲ ಎಂದು  ಬಿಪಿಐಎ ನಿರ್ದೇಶಕ ಸುರೇಶ್ ಚಂದ್ರ ಹೊಟಾ ಹೇಳಿದ್ದಾರೆ.

ನಂತರ ಆ ರೋಗಿಯನ್ನು ಕ್ಯಾಪಿಟಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ  ಆತ ಬದುಕುಳಿಯಲಿಲ್ಲ. ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಆತ ತನ್ನ ಸಂಬಂಧಿಕರೊಬ್ಬರೊಂದಿಗೆ ಬೆಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com