ಪ್ರಯಾಣಿಕರೊಬ್ಬರ ತುರ್ತು ಚಿಕಿತ್ಸೆಗಾಗಿ ಭುವನೇಶ್ವರದಲ್ಲಿ ಕೊಲ್ಕತ್ತಾ- ಬೆಂಗಳೂರು ವಿಮಾನ ಲ್ಯಾಂಡ್

ಪ್ರಯಾಣಿಕರೊಬ್ಬರಿಗೆ ತುರ್ತು ಚಿಕಿತ್ಸೆ ಕಾರಣದಿಂದಾಗಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವೊಂದು ಇಲ್ಲಿನ ಬಿಜಿ ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ್ : ಪ್ರಯಾಣಿಕರೊಬ್ಬರಿಗೆ  ತುರ್ತು ಚಿಕಿತ್ಸೆ ಕಾರಣದಿಂದಾಗಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವೊಂದು  ಇಲ್ಲಿನ ಬಿಜಿ ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

32 ವರ್ಷದ ವ್ಯಕ್ತಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯ ಇದುದ್ದರಿಂದ ಇಂಡಿಗೊ ವಿಮಾನ (822 ) ಬೆಳಗ್ಗೆ 11-15 ರ ಸುಮಾರಿನಲ್ಲಿ ಲ್ಯಾಂಡ್ ಆಗಿದ್ದು,  ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವೈದ್ಯರು ಎಲ್ಲಾ ರೀತಿಯ ನೆರವು ನೀಡಿದ್ದಾರೆ.

ಆತನ ಹೃದಯ ಬಡಿತ ನಿಂತಿದ್ದು, ದೇಹ ತಣ್ಣಗಾಗಿದೆ. ಆತ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸುತ್ತಿಲ್ಲ ಎಂದು  ಬಿಪಿಐಎ ನಿರ್ದೇಶಕ ಸುರೇಶ್ ಚಂದ್ರ ಹೊಟಾ ಹೇಳಿದ್ದಾರೆ.

ನಂತರ ಆ ರೋಗಿಯನ್ನು ಕ್ಯಾಪಿಟಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ  ಆತ ಬದುಕುಳಿಯಲಿಲ್ಲ. ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಆತ ತನ್ನ ಸಂಬಂಧಿಕರೊಬ್ಬರೊಂದಿಗೆ ಬೆಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com