ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಆರೋಪ ಮಾಡಿದ್ದು, ಭಾರತದ ಮೇಲೆ ಶೇ.31 ರಷ್ಟು ಪರೋಕ್ಷ ತೆರಿಗೆ ಹೇರಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. ಜಿಎಸ್ ಟಿ ಕುರಿತಂತೆ ಸಾಕಷ್ಟು ಟೀಕೆ, ಅಪಪ್ರಚಾರ ನಡೆಯುತ್ತಿದೆ. ಶೇ.31 ರಷ್ಟು ಪರೋಕ್ಷ ತೆರಿಗೆ ವಿಧಿಸಿದ್ದವರು ಹಾಗೂ ಜಿಎಸ್ ಟಿ ಯನ್ನು ಸತತವಾಗಿ ವಿರೋಧಿಸುತ್ತಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಗೆ ಫೇಸ್ ಬುಕ್ ನಲ್ಲಿ ಜೇಟ್ಲಿ ಬರೆದಿದ್ದಾರೆ.