ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ನಿವಾಸಿ ಎನ್. ಲಕ್ಷ್ಮಿನಾರಾಯಣ ಎಂಬುವವರು ಈ ದೂರು ಸಲ್ಲಿಸಿದ್ದು . ಡಿಸೆಂಬರ್ 23ರ ಬೆಳಿಗ್ಗೆ ತನ್ನ ಹಸು ಕಾಣೆಯಾಗಿತ್ತು, ಬಳಿಕ ಅಲ್ಲಿ ಇಲ್ಲಿ ಹುಡುಕಿದ ಲಕ್ಷ್ಮಿನಾರಾಯಣ ರಿಗೆ ಗೋಕಿವಾಡ ಗ್ರಾಮದ ಕೆ ಸೂರ್ಯಪ್ರಕಾಸ ರಾವ್ ಅವರ ಹೊಲದಲ್ಲಿ ತನ್ನ ಹಸುವು ಪತ್ತೆಯಾಗಿದೆ. ಹಸುವಿನ ಮೇಲೆ ಕ್ರೂರವಾಗಿ ಹಲ್ಲೆ, ಆಕ್ರಮಣ ನಡೆದಿರುವುದು ಪತ್ತೆಯಾಗಿದೆ.ಅಲ್ಲದೆ ಹಸುವಿನ ಮೇಲೆ ಯಾರೋ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ ಎಂದು ಪಿತಾಪುರಮ್ ಗ್ರಾಮೀಣ ಭಾಗದ ಸಬ್ ಇನ್ಸ್ ಪೆಕ್ಟರ್ ಪಿ.ವಿ ಆರ್ ಮೂರ್ತಿ ಹೇಳಿದ್ದಾರೆ.