ಕೋಟೆಯ ಒಳಭಾಗದಲ್ಲಿ ಋಷಿ ಭಾರಧ್ವಾಜ ಹಾಗೂ ಸರಸ್ವತಿ ದೇವಿಯ ಪ್ರತಿಮೆ ನಿರ್ಮಾಣ ಮಾಡಲಾಗುವುದು, ಕುಂಭಮೇಳವಷ್ಟೇ ಅಲ್ಲದೇ ಸಾಮಾನ್ಯದ ದಿನಗಳಲ್ಲೂ ಹಿಂದೂಗಳು ಅಕ್ಬರ್ ಕೋಟೆಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಈ ವರೆಗೂ ಅಕ್ಬರ್ ಕೋಟೆಯಲ್ಲಿನ ಅಕ್ಷಯವತ್ ಹಾಗೂ ಸರಸ್ವತಿ ಕೂಪ್ ಗೆ ಹಿಂದೂಗಳ ಪ್ರವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ.