ಹಿಮಾಚಲ ಪ್ರದೇಶದ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಪ್ರಯುಕ್ತ ಏರ್ಪಡಿಸಲಾಗಿದ್ದ 'ಜನ್ ಆಭಾರ್' ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 'ಧರ್ಮಶಾಲಾ ನನಗೆ ಮನೆಯ ಹಾಗೆ. ಇಲ್ಲಿ ಅನೇಕ ವರ್ಷಗಳ ಕಾಲ ನಾನು ಪಕ್ಷಕ್ಕಾಗಿ ಕೆಲಸ ಮಾಡಿಕೊಂಡಿದ್ದೆ. ಆಗ ರಾಜ್ಯಾದಂತ್ಯ ಓಡಾಡಿಕೊಂಡಿದ್ದ ನನಗೆ ಅನೇಕ ಅನುಭವಗಳಾಗಿವೆ. ಅನೇಕ ಹಿರಿಯ ನಾಯಕರೊಂದಿಗೆ ನಾನಿಲ್ಲಿ ಕೆಲಸ ಮಾಡಿದ್ದೇನೆ' ಎಂದರು.