ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಾಲ್ಗುರ್ ಜಿಲ್ಲೆಯಲ್ಲಿನ ವಾಸಾಯಿ ಬಳಿ ಪರಿಸರ ಸಂರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಸ್ತಾವಿತ ಬುಲೆಟ್ ಟ್ರೈನ್ ಯೋಜನೆ ವಿಚಾರವಾಗಿ ಮೋದಿ ವಿರುದ್ಧ ಗುಡುಗಿದರು. ಅಭಿವೃದ್ದಿ ವಿಚಾರದಲ್ಲಿ ದೊಡ್ಡದಾಗಿ ಸಮರ್ಥನೆ ಮಾಡಿಕೊಳ್ಳುವ ಪ್ರಧಾನಿ ಮೋದಿ ನಟಸಾಮ್ರಾಟ, ಬ್ಲಪರ್ ಎಂದು ಟೀಕಿಸಿದರು.
ದುಬಾರಿ ವೆಚ್ಚದ ಬುಲೆಟ್ ರೈಲಿನಿಂದ ಏನು ಉಪಯೋಗ , ಇದರಿಂದ ಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ ಜಿವಾನಿ, ಮೊದಲು ಉಪನಗರ ರೈಲು ಸೇವೆಯನ್ನು ಅಭಿವೃದ್ಧಿಪಡಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಢ್ನವೀಸ್ ಅವರನ್ನು ಒತ್ತಾಯಿಸಿದರು.
Advertisement