ಬೆಂಕಿ ಪಟ್ಟಣ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ ಯುವಕ ತಾನು ಎಚ್ಐವಿ ಪೀಡಿತನೆಂದು ತಿಳಿದ ಬಳಿಕ ಶಿವಕಾಶಿ ಸರ್ಕಾರಿ ರಕ್ತ ಬ್ಯಾಂಕ್ ಗೆ ತೆರಳಿ ತಾನು ನವೆಂಬರ್ 30 ರಂದು ನೀಡಿದ್ದ ರಕ್ತವನ್ನು ಯಾರಿಗೂ ಮರುಪೂರಣ ಮಾಡದಂತೆ ಮನವಿ ಮಾಡಿದನು. ಏತನ್ಮಧ್ಯೆ, ರಕ್ತವನ್ನು ವಿರುದುನಗರ ಜಿಲ್ಲೆಯ ಸಾತ್ತೂರಿನ ಗರ್ಭಿಣಿ ಮಹಿಳೆಗೆ ನೀಡಲಾಗಿತ್ತು. ವೈದ್ಯಕೀಯ ನಿರ್ಲಕ್ಷದ ವರದಿಗಳು ಮಾದ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಇತ್ತ ರಕ್ತದಾನಿ ಯುವಕ ಆತ್ಮಹತ್ಯೆ ಯತ್ನ ನಡೆದಿದ್ದನು.