ಕಂಬಳ ಕ್ರೀಡೆಗೆ ನಿಷೇಧ ಕೋರಿ ಪೇಟಾ ಮನವಿ: ಫೆ.12ರಂದು ಸುಪ್ರೀಂ ವಿಚಾರಣೆ

ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನ ಓಟ ಕಂಬಳವನ್ನು ನಿಷೇಧಿಸಬೇಕೆಂದು ಪೇಟಾ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನ ಓಟ ಕಂಬಳವನ್ನು ನಿಷೇಧಿಸಬೇಕೆಂದು ಪೇಟಾ ಸಂಘಟನೆ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಇದೇ 12ರಂದು ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಮ್.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಪೇಟಾ ಸಂಘಟನೆ ಪರ ವಕೀಲ ಅರುಣಿಮಾ ಕೆಡಿಯಾ ಮನವಿ ಸಲ್ಲಿಸಿ ಶೀಘ್ರ ವಿಚಾರಣೆ ನಡೆಸುವಂತೆ ನಮೂದಿಸಿದರು.
ಕಂಬಳ ಕ್ರೀಡೆಯ ಪಾವಿತ್ರ್ಯತೆಯನ್ನು ಕಾಪಾಡುವಂತೆ ಕರ್ನಾಟಕ ಸರ್ಕಾರ ವಿಧೇಯಕವನ್ನು ಹೊರಡಿಸಿದೆ ಎಂದು ಕೆಡಿಯಾ ನ್ಯಾಯಾಲಯಕ್ಕೆ ತಿಳಿಸಿದರು.
ಕಂಬಳ ಕ್ರೀಡೆ ಆಚರಣೆಯನ್ನು ಮುಂದುವರಿಸುವ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದ್ದು ರಾಷ್ಟ್ರಪತಿಗಳಿಂದ ಒಪ್ಪಿಗೆ ಸಿಗಲು ಬಾಕಿಯಿದೆ ಎಂದು ಕೆಡಿಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೇಟಾ ಸಂಘಟನೆ ಸಲ್ಲಿಸಿದ್ದ ಮನವಿಗೆ ಮೂರು ವಾರಗಳೊಳಗೆ ಉತ್ತರಿಸುವಂತೆ ಕಳೆದ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದು, ಪೇಟಾ ಸಂಘಟನೆಗೆ 2 ವಾರಗಳೊಳಗೆ ಪ್ರತಿವಾದವನ್ನು ಮಂಡಿಸಲು ಕಾಲಾವಕಾಶ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com