ರೇಣುಕಾ, ಮಣಿಶಂಕರ್ ಉದ್ಧಟತನ ನಿಜಕ್ಕೂ ಪಕ್ಷಕ್ಕೆ ಮುಜುಗರ ತರುತ್ತಿದೆ: ಕಾಂಗ್ರೆಸ್ ನಾಯಕ

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವ ವೇಳೆ ಉದ್ಧಟತನ ತೋರಿದ ಕಾಂಗ್ರೆಸ್ ನ ಹಿರಿಯ ನಾಯಕಿ ರೇಣುಕಾ ಚೌಧರಿ ಮತ್ತು...
ರೇಣುಕಾ ಚೌಧರಿ, ಮಣಿಶಂಕರ್ ಅಯ್ಯರ್
ರೇಣುಕಾ ಚೌಧರಿ, ಮಣಿಶಂಕರ್ ಅಯ್ಯರ್
ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವ ವೇಳೆ ಉದ್ಧಟತನ ತೋರಿದ ಕಾಂಗ್ರೆಸ್ ನ ಹಿರಿಯ ನಾಯಕಿ ರೇಣುಕಾ ಚೌಧರಿ ಮತ್ತು ಮಣಿಶಂಕರ್ ಅಯ್ಯರ್ ವಿರುದ್ಧ ಆ ಪಕ್ಷದವರೇ ಕಿಡಿಕಾರಿದ್ದಾರೆ. 
ಮಣಿಶಂಕರ್ ಅಯ್ಯರ್ ಹಾಗ ರೇಣುಕಾ ಚೌಧರಿ ತೋರುತ್ತಿರುವ ಉದ್ಧಟತನ ನಿಜಕ್ಕೂ ಪಕ್ಷಕ್ಕೆ ಮುಜುಗರ ತರುತ್ತಿದೆ. ಇಬ್ಬರೂ ಪಕ್ಷಕ್ಕೆ ಹೊರೆಯಾಗಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ತೆಹಸೀನ್ ಪೂನವಾಲಾ ಆರೋಪಿಸಿದ್ದಾರೆ. 
ರಾಜ್ಯಸಭೆಯಲ್ಲಿ ಅತ್ಯಂತ ಗಂಭೀರ ವಿಷಯದ ಕುರಿತು ಚರ್ಚೆ ನಡೆಯುವಾಗ ವಿಕಟ ನಗೆ. ಅಸಂಬದ್ಧವಾಗಿ ವರ್ತಿಸುವುದು ಯಾವ ಸದಸ್ಯರಿಗೂ ಶೋಭೆ ತರುವುದಿಲ್ಲ. ಶಿಸ್ತಿನ ಪಕ್ಷವಾಗಿರುವ ಕಾಂಗ್ರೆಸ್ ಇಂಥ ಅಪಸವ್ಯಗಳನ್ನು ಸಹಿಸುವುದಿಲ್ಲ ಎಂದು ಪೂನವಾಲಾ ಹೇಳಿದ್ದಾರೆ. 
ಕಾಂಗ್ರೆಸ್ ಗಾಂಧಿ, ನೆಹರೂರಂಥ ಮಹಾನ್ ನಾಯಕರಿದ್ದ ಪಕ್ಷ. ಅಂತಹ ಪಕ್ಷದಲ್ಲಿ ಇವರಿಬ್ಬರ ನಡವಳಿಕೆ ಪಕ್ಷಕ್ಕೆ ಮುಜುಗರ ತರುತ್ತಿದೆ. ಇಬ್ಬರ ಉದ್ಧಟತನ ಪಕ್ಷಕ್ಕೆ ಭಾರೀ ಹೊಡೆತ ನೀಡುತ್ತಿದೆ ಎಂದು ಅವರು ಟ್ವೀಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com