ಅಜಯ್ ಮಾಕನ್ ಅವರ ಕಾರ್ಯಶೈಲಿಯಿಂದ ಕಾಂಗ್ರೆಸ್ ಗೆ ಹಾನಿ:ಶೀಲಾ ದೀಕ್ಷಿತ್

ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕನ್ ಅವರ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ....
ಶೀಲಾ ದೀಕ್ಷಿತ್-ಅಜಯ್ ಮಾಕನ್
ಶೀಲಾ ದೀಕ್ಷಿತ್-ಅಜಯ್ ಮಾಕನ್
ನವದೆಹಲಿ: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕನ್ ಅವರ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್, ಅವರ ಕೆಲಸದ ಶೈಲಿಯಿಂದಾಗಿ ಪಕ್ಷಕ್ಕೆ ಸಾಕಷ್ಟು ಹಾನಿಯುಂಟಾಗಿದೆ ಎಂದು ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷದ ಅಧ್ಯಕ್ಷರು ದಿನವಿಡೀ ಪಕ್ಷಕ್ಕಾಗಿ ದುಡಿಯಬೇಕು, ಎಲ್ಲರೊಂದಿಗೆ ಕುಳಿತು ಮಾತನಾಡಬೇಕು ಮತ್ತು ಎಲ್ಲವನ್ನೂ ತಿಳಿದುಕೊಂಡಿರಬೇಕು. ವಿಷಯವನ್ನು ಸರಿಪಡಿಸುವುದು ಅಗತ್ಯವಿದೆ ಎಂದು ಹೇಳಿದರೆ ಒಳ್ಳೆಯ ಸಂಗತಿ.ಅವರೇನು ಮಾಡುತ್ತಾರೆ ನೋಡೋಣ. ಅವರ ಕೆಲಸದ ಶೈಲಿ ಕಾಂಗ್ರೆಸ್ ಗೆ ಭಾರೀ ನಷ್ಟವನ್ನುಂಟುಮಾಡಿದೆ ಎಂದರು.
ಮಾಜಿ ದೆಹಲಿ ಸಚಿವ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ, ಅವರ ಬಗ್ಗೆ ಶ್ಲಾಘಿಸಿದ ಶೀಲಾ ದೀಕ್ಷಿತ್, ಕಾಂಗ್ರೆಸ್ ತತ್ವಗಳನ್ನು ಒಪ್ಪಿಕೊಂಡವರು ಬಿಜೆಪಿ ಜೊತೆ ಇರುವುದು ಕಷ್ಟಸಾಧ್ಯ, ಮತ್ತೆ ಕಾಂಗ್ರೆಸ್ ಗೆ ಬರಲು ಇಚ್ಛಿಸುತ್ತಾರೆ ಎಂದರು.
ಕಳೆದ ವರ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದ ಲವ್ಲಿ ಕಳೆದ ಶನಿವಾರ ಕಾಂಗ್ರೆಸ್ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com