ಎಐಎಡಿಎಂಕೆ ಆಡಳಿತ ಕೆಟ್ಟದಾಗಿದೆ, ಅದಕ್ಕಾಗಿ ರಾಜಕೀಯ ಪ್ರವೇಶ: ಕಮಲ ಹಾಸನ್

ಎಐಎಡಿಎಂಕೆ ಆಡಳಿತ ಕೆಟ್ಟದ್ದಾಗಿರುವ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ನಟ ಕಮಲ ಹಾಸನ್ ಹೇಳಿದ್ದಾರೆ....
ಕಮಲ ಹಾಸನ್
ಕಮಲ ಹಾಸನ್
Updated on
ಚೆನ್ನೈ: ಎಐಎಡಿಎಂಕೆ ಆಡಳಿತ ಕೆಟ್ಟದ್ದಾಗಿರುವ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ನಟ ಕಮಲ ಹಾಸನ್ ಹೇಳಿದ್ದಾರೆ.
ಫೆಬ್ರವರಿ 21ರಂದು ತಮ್ಮ ಹೊಸ ಪಕ್ಷ ಉದ್ಘಾಟನೆಗೂ ಮುನ್ನ ನಾಮ್ ತಮಿಳರ್ ಕಟ್ಚಿ ಯ ಮುಖಂಡ ಸೀಮಾನ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಾಳೆ ತಮ್ಮ ಹೊಸ ಪಕ್ಷ ಉದ್ಘಾಟಿಸಲಿರುವ ಕಮಲ ಹಾಸನ್ ಮಧುರೈ ನಿಂದ ತಮಿಳು ನಾಡಿನಾದ್ಯಂತ ಪ್ರವಾಸ ಆರಂಭಿಸಲಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ತೀರಾ ಕಳಪೆಯಾಗಿದೆ, ಹೀಗಾಗಿ ನಾನು ಆ ಪಕ್ಷದ ಯಾರೋಬ್ಬರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು. 
ಮಧುರೈ ನಲ್ಲಿ  ನಡೆಯುವ ಪಕ್ಷ ಉದ್ಘಾಟನೆ ಸಮಾರಂಭಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಆಗಮಸಲಿದ್ದಾರೆ, ಕೇರಳ ಸಿಎಂ ಪಿಣರಾಯಿ ವಿಜಯನ್, ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com