ಎಐಎಡಿಎಂಕೆ ಆಡಳಿತ ಕೆಟ್ಟದಾಗಿದೆ, ಅದಕ್ಕಾಗಿ ರಾಜಕೀಯ ಪ್ರವೇಶ: ಕಮಲ ಹಾಸನ್

ಎಐಎಡಿಎಂಕೆ ಆಡಳಿತ ಕೆಟ್ಟದ್ದಾಗಿರುವ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ನಟ ಕಮಲ ಹಾಸನ್ ಹೇಳಿದ್ದಾರೆ....
ಕಮಲ ಹಾಸನ್
ಕಮಲ ಹಾಸನ್
ಚೆನ್ನೈ: ಎಐಎಡಿಎಂಕೆ ಆಡಳಿತ ಕೆಟ್ಟದ್ದಾಗಿರುವ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ನಟ ಕಮಲ ಹಾಸನ್ ಹೇಳಿದ್ದಾರೆ.
ಫೆಬ್ರವರಿ 21ರಂದು ತಮ್ಮ ಹೊಸ ಪಕ್ಷ ಉದ್ಘಾಟನೆಗೂ ಮುನ್ನ ನಾಮ್ ತಮಿಳರ್ ಕಟ್ಚಿ ಯ ಮುಖಂಡ ಸೀಮಾನ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಾಳೆ ತಮ್ಮ ಹೊಸ ಪಕ್ಷ ಉದ್ಘಾಟಿಸಲಿರುವ ಕಮಲ ಹಾಸನ್ ಮಧುರೈ ನಿಂದ ತಮಿಳು ನಾಡಿನಾದ್ಯಂತ ಪ್ರವಾಸ ಆರಂಭಿಸಲಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ತೀರಾ ಕಳಪೆಯಾಗಿದೆ, ಹೀಗಾಗಿ ನಾನು ಆ ಪಕ್ಷದ ಯಾರೋಬ್ಬರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು. 
ಮಧುರೈ ನಲ್ಲಿ  ನಡೆಯುವ ಪಕ್ಷ ಉದ್ಘಾಟನೆ ಸಮಾರಂಭಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಆಗಮಸಲಿದ್ದಾರೆ, ಕೇರಳ ಸಿಎಂ ಪಿಣರಾಯಿ ವಿಜಯನ್, ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com