ಖಲಿಸ್ತಾನ್ ಉಗ್ರ ಹೇಗೆ ವೀಸಾ ಪಡೆದ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ: ವಿದೇಶಾಂಗ ಸಚಿವಾಲಯ

ತಪ್ಪಿತಸ್ಥ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ಭಾರತ ಪ್ರವೇಶಿಸಲು ಹೇಗೆ ವೀಸಾ ಪಡೆದ ಎಂಬುದರ ಬಗ್ಗೆ ...
ಜಸ್ಪಾಲ್ ಅತ್ವಾಲ್
ಜಸ್ಪಾಲ್ ಅತ್ವಾಲ್
Updated on
ನವದೆಹಲಿ: ತಪ್ಪಿತಸ್ಥ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ಭಾರತ ಪ್ರವೇಶಿಸಲು ಹೇಗೆ ವೀಸಾ ಪಡೆದ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ ತಿಳಿಸಿದ್ದಾರೆ.
ಕೆನಡಾ ಹೈಕಮಿಷನರ್ ನಾದಿರ್ ಪಟೇಲ್ ಅವರು ಅತ್ವಾಲ್ ನನ್ನು ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ರಾತ್ರಿ ದೆಹಲಿಯಲ್ಲಿ ಆಯೋಜಿಸಿರುವ ಔತಣಕೂಟಕ್ಕೆ ಆಹ್ವಾನಿಸಿರುವುದು ತೀವ್ರ ವಿವಾದಕ್ಕಿಡಾಗಿದೆ.
ವಿವಾದದ ಬಳಿಕ ಎಚ್ಚೆತ್ತುಕೊಂಡ ಕೆನಡಾ ಹೈಕಮಿಷನರ್, ಅತ್ವಾಲ್ ಗೆ ನೀಡಿದ ಆಹ್ವಾನವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.
ಖಲಿಸ್ತಾನ ಉಗ್ರನಿಗೆ ವೀಸಾ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣಕ್ಕೆ ಏನು ಹೇಳಲು ಸಾಧ್ಯವಿಲ್ಲ. ಭಾರತಕ್ಕೆ ಬರುವವರಿಗೆ ವಿಭಿನ್ನ ದಾರಿಗಳಿವೆ. ಒಂದು ಅವರು ಭಾರತೀಯರಾಗಿರಬೇಕು ಇಲ್ಲವೆ ಒಸಿಐ ಕಾರ್ಡ್ ಹೊಂದಿರಬೇಕು. ಉಗ್ರ ಹೇಗೆ ವೀಸಾ ಪಡೆದ ಎಂಬ ಕುರಿತು ನಮ್ಮ ಮಿಷನ್ ನಿಂದ ವಿವರ ಪಡೆದು ಪರಿಶೀಲಿಸುತ್ತೇವೆ ಎಂದು ರವೀಸ್ ಕುಮಾರ್ ಹೇಳಿದ್ದಾರೆ.
ಖಲಿಸ್ತಾನ್ ಪರ ಚಳವಳಿಗಾರರ ಮೃದು ಧೋರಣೆ ಹೊಂದಿರುವ ಬಗ್ಗೆ ಜಸ್ಟಿನ್ ಟ್ರುಡೊ ಸರ್ಕಾರ ಈಗಾಗಲೇ ವಿರೋಧಗಳನ್ನು ಎದುರಿಸುತ್ತಿದ್ದು, ಈಗ ಔತಣಕೂಟಕ್ಕೆ ಅತ್ವಾಲ್ ಆಹ್ವಾನ ನೀಡಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
1986ರಲ್ಲಿ ಅಕಾಲಿದಳದ ನಾಯಕ ಪಂಜಾಬ್ ಸಚಿವ ಮಲ್ಕಿಯತ್ ಸಿಂಗ್ ಸಿಧು ಅವರ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಅತ್ವಾಲ್ ತಪ್ಪಿತಸ್ಥನಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com