ನಿತೀಶ್ ಕುಮಾರ್ ಮತ್ತು ಮೋದಿ ನನ್ನ ಮನೆಯಲ್ಲಿ ದೆವ್ವ ಬಿಟ್ಟಿದ್ದಾರೆ: ತೇಜ ಪ್ರತಾಪ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನನ್ನ ಮನೆಗೆ ದೆವ್ವ ಬಿಟ್ಟಿದ್ದಾರೆ ಎಂದು ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಆರೋಪಿಸಿದ್ದಾರೆ....
ತೇಜ ಪ್ರತಾಪ್ ಯಾದವ್
ತೇಜ ಪ್ರತಾಪ್ ಯಾದವ್
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನನ್ನ ಮನೆಗೆ ದೆವ್ವ ಬಿಟ್ಟಿದ್ದಾರೆ ಎಂದು ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ತೇಜ ಪ್ರತಾಪ್ ಯಾದವ್ ನಿತಿಶ್ ಕುಮಾರ್ ಮತ್ತು ಸುಶೀಲ್ ಮೋದಿ  ನನಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ನಾನು ವಾಸವಿದ್ದ ಮನೆಗೆ ದೆವ್ವ ಬಿಟ್ಟಿದ್ದರು, ಹೀಗಾಗಿ ನಾನು ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಆರ್ಜೆಡಿ ಜೊತೆಗಿನ ಮೈತ್ರಿ ಮುರಿದುಕೊಂಡ ಜೆಡಿಯು 2017ರ ಜುಲೈ ನಲ್ಲಿ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ನಿತೀಶ್ ಕುಮಾರ್ ಸರ್ಕಾರ ಸೂಚಿಸಿತ್ತು. ತೇಜ ಪ್ರತಾಪ್ ಯಾದವೇ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ, ಎರಡು ತಿಂಗಳ ಹಿಂದೆ ನಿತೀಶ್ ಕುಮಾರ್ ಅವರನ್ನು ದೋಖೆಬಾಜ್ ಎಂದು ಟೀಕಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com