ಪಾಟ್ನಾ: ಮುಜಾರಪುರ್ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ವಿರೋಧ ಪಕ್ಷಗಳು ಬಿಹಾರ ವಿಧಾನಸಭೆ ಹೊರಭಾಗ ಪ್ರತಿಭಟನೆ ನಡೆಸಿದವು.
ಬಿಜೆಪಿ ಮುಖಂಡ ಮನೋಜ್ ಬೈತಾ ಅವರ ವಾಹನ ಶಾಲೆಯೊಂದಕ್ಕೆ ನುಗ್ಗಿ 9 ಮಕ್ಕಳು ಸಾವನ್ನಪ್ಪಿದ್ದವು, ಈ ಸಂಬಂಧ ಬೈತಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ಇದುವರೆಗೂ ಮನೋಜಾ ಬೈತಾ ರನ್ನು ಬಂಧಿಸಿಲ್ಲ ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ, ಬೈತಾ ಪೊಲೀಸರ ಮುಂದೆ ಶರಣಾಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು, ಆದರೆ ಇದುವರೆಗೂ ಯಾವುದೂ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಆತ ನೇಪಾಳಕ್ಕೆ ಓಡಿಹೋಗಿದ್ದಾನೆಯೇ? ಈ ಸಂಬಂಧ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ಸುಶೀಲ್ ಮೋದಿ ಇದುವರೆಗೂ ಈ ಬಗ್ಗೆ ಎಲ್ಲಿಯೀ ಮಾತನಾಡಿಲ್ಲ, ಆತನನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಫೆಬ್ರವರಿ 26 ರಂದು ಬಿಜೆಪಿ ನಾಯಕನ ಕಾರು ಶಾಲೆಯೊಂದಕ್ಕೆ ನುಗ್ಗೆ ಸುಮಾರು 9 ಮಕ್ಕಳು ಮೃತಪಟ್ಟು 20 ಮಕ್ಕಳು ಗಾಯಗೊಂಡಿದ್ದವು.