ಹಿಟ್ ಅಂಡ್ ರನ್ ಕೇಸ್: ಬಿಜೆಪಿ ಮುಖಂಡನ ವಿರುದ್ಧ ಬಿಹಾರದಲ್ಲಿ ಪ್ರತಿಭಟನೆ

ಮುಜಾರಪುರ್ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ವಿರೋಧ ಪಕ್ಷಗಳು ಬಿಹಾರ ವಿಧಾನಸಭೆ ಹೊರಭಾಗ ಪ್ರತಿಭಟನೆ ನಡೆಸಿದವು....
ಬಿಜೆಪಿ ಮುುಖಂಡನ ವಿರುದ್ಧ ಪ್ರತಿಭಟನೆ
ಬಿಜೆಪಿ ಮುುಖಂಡನ ವಿರುದ್ಧ ಪ್ರತಿಭಟನೆ
Updated on
ಪಾಟ್ನಾ: ಮುಜಾರಪುರ್ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ವಿರೋಧ ಪಕ್ಷಗಳು ಬಿಹಾರ ವಿಧಾನಸಭೆ ಹೊರಭಾಗ ಪ್ರತಿಭಟನೆ ನಡೆಸಿದವು.
ಬಿಜೆಪಿ ಮುಖಂಡ ಮನೋಜ್ ಬೈತಾ ಅವರ ವಾಹನ ಶಾಲೆಯೊಂದಕ್ಕೆ ನುಗ್ಗಿ 9 ಮಕ್ಕಳು ಸಾವನ್ನಪ್ಪಿದ್ದವು,  ಈ ಸಂಬಂಧ ಬೈತಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. 
ಇದುವರೆಗೂ ಮನೋಜಾ ಬೈತಾ ರನ್ನು ಬಂಧಿಸಿಲ್ಲ ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ,  ಬೈತಾ ಪೊಲೀಸರ ಮುಂದೆ ಶರಣಾಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು, ಆದರೆ ಇದುವರೆಗೂ ಯಾವುದೂ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಆತ ನೇಪಾಳಕ್ಕೆ ಓಡಿಹೋಗಿದ್ದಾನೆಯೇ? ಈ ಸಂಬಂಧ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ಸುಶೀಲ್ ಮೋದಿ  ಇದುವರೆಗೂ ಈ ಬಗ್ಗೆ ಎಲ್ಲಿಯೀ ಮಾತನಾಡಿಲ್ಲ, ಆತನನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಫೆಬ್ರವರಿ 26 ರಂದು ಬಿಜೆಪಿ ನಾಯಕನ ಕಾರು ಶಾಲೆಯೊಂದಕ್ಕೆ ನುಗ್ಗೆ ಸುಮಾರು 9 ಮಕ್ಕಳು ಮೃತಪಟ್ಟು 20 ಮಕ್ಕಳು ಗಾಯಗೊಂಡಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com