ರಾಮಜನ್ಮಭೂಮಿ ಭೂಮಾಲಿಕತ್ವದ ಸಂಬಂಧ ನಮ್ಮ ಬಳಿ ಸಕ್ರಮ ದಾಖಲೆ ಪತ್ರಗಳಿವೆ. ಭೂ ವಿವಾದವನ್ನು ಯಾರ ಭಾವನೆಗಳಿಗೆ ಘಾಸಿಯಾಗದಂತೆ ಬಗೆಹರಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿರುವ ಕಾರಣ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದು ಅಖಿಲ ಭಾರತೀಯ ಪಂಚ ರಮಾನಂದಿ ನಿರ್ಮಾಣಿ ಅನಿ ಅಖಾಡದ ಮುಖ್ಯಸ್ಥರಾದ ಧರಮ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.