ನೀವು ನಿರ್ದೋಷಿಯಾಗಿದ್ದು ಸಂತಸ ತಂದಿದೆ: ಎ ರಾಜಾಗೆ ಮನಮೋಹನ್ ಸಿಂಗ್

2 ಜಿ ಹಗರಣದ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬಂದಿರುವ ಮಾಜಿ ಕೇಂದ್ರ ಸಚಿವ ಎ.ರಾಜ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಅಭಿನಂದಿಸಿದ್ದು, ನೀವು ನಿರ್ದೋಷಿಯಾಗಿದ್ದು ಸಂತಸ ತಂದಿದೆ...
ಡಾ.ಮನಮೋಹನ್ ಸಿಂಗ್
ಡಾ.ಮನಮೋಹನ್ ಸಿಂಗ್
ನವದೆಹಲಿ: 2 ಜಿ ಹಗರಣದ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬಂದಿರುವ ಮಾಜಿ ಕೇಂದ್ರ ಸಚಿವ ಎ.ರಾಜ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಅಭಿನಂದಿಸಿದ್ದು, ನೀವು ನಿರ್ದೋಷಿಯಾಗಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ. 
"ನಾನು ಯಾವುದೇ ತಪ್ಪು ಮಾಡಿಲ್ಲ, ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದೆ ಎಂಬುದನ್ನು ಈಗ ನೀವು ನೆನಪಿಸಿಕೊಳ್ಳಬಹುದು" ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನನ್ನನ್ನು ಏಕೆ ಬಹಿರಂಗವಾಗಿ ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂಬುದು ಅರ್ಥವಾಗಿದೆ ಎಂದು ರಾಜ ಹೇಳಿದ್ದರು, ರಾಜ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಾ.ಮನಮೋಹನ್ ಸಿಂಗ್, ನೀವು 2 ಜಿ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದು ಸಂತಸ ತಂದಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com