ಪದ್ಮಾವತಿ ಚಿತ್ರದ ನಿಷೇಧಕ್ಕೆ ಕರಣಿ ಸೇನಾ ಒತ್ತಾಯ

ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರೌವ ಕರಣಿ ಸೇನಾ, ಪದ್ಮಾವತಿ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದೆ.
ಕರಣಿ ಸೇನಾ
ಕರಣಿ ಸೇನಾ
Updated on
ನವದೆಹಲಿ: ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರೌವ ಕರಣಿ ಸೇನಾ, ಪದ್ಮಾವತಿ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದೆ. 
ಚಿತ್ರಕ್ಕೆ ಪ್ರಮಾಣ ಪತ್ರ ನೀಡಿರುವ ಕೇಂದ್ರ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕರಣಿ ಸೇನಾ, ಈ ಚಿತ್ರವನ್ನು ಬೆಂಬಲಿಸುವುದರಿಂದ ಸರ್ಕಾರಕ್ಕೆ ಸಿಗುವ ಲಾಭವಾದರೂ ಏನು, ಹಿಂದೂ ಪರವಿರುವ ಪಕ್ಷಗಳು ಏಕೆ ಮೌನವಾಗಿವೆ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ನೋಟು ನಿಷೇಧದ ನಂತರ ಹಣವಿಲ್ಲದೇ ಪರದಾಡುತ್ತಿದ್ದರು, ಆದರೆ ಬನ್ಸಾಲಿಗೆ ಹೇಗೆ ಹಣ ಸಿಕ್ಕಿತು ಎಂದು ಕರಣಿ ಸೇನೆ ಪ್ರಶ್ನಿಸಿದೆ. 
ನೋಟು ನಿಷೇಧದ ನಂತರ ನಮಗೆ 4,00 ರೂಪಾಯಿ ಸಿಗುವುದೇ ಕಷ್ಟವಾಗಿತ್ತು ಹೀಗಿದ್ದಾಗ ಬನ್ಸಾಲಿಗೆ 160-180 ಕೋಟಿ ರೂಪಾಯಿ ಎಲ್ಲಿಂದ ಸಿಕ್ಕಿತು, ಬನ್ಸಾಲಿ, ಹೆಡ್ಲಿ ಮೂಲಕ ಬ್ರಿಟನ್ ನಿಂದ  ಪ್ರಮಾನೀಕರಣವನ್ನೂ ಪಡೆದಿದ್ದಾರೆ. ಹೆಡ್ಲಿ ಈಗ ಜೈಲಿನಲ್ಲಿದ್ದು ಬನ್ಸಾಲಿಯನ್ನೇಕೆ ಈವರೆಗೂ ವಿಚಾರಣೆ ಮಾಡಿಲ್ಲ ಎಂದು ಕರಣಿ ಸೇನೆ ಪ್ರಶ್ನಿಸಿದೆ.  ಪದ್ಮಾವತಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರ್ಧರಿಸಿರುವುದರ ಬಗ್ಗೆ ಸೆನ್ಸಾರ್ ಮಂಡಳಿ ಹೇಳಿಕೆ ನೀಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com