ಒಂದು ಕಡೆ ದಲಿತರು ಬಂದ್ ಕರೆ ನೀಡುತ್ತಿದ್ದಾರೆ, ಮತ್ತೊಂದು ಕಡೆ ಹಿಂದೂತ್ವವಾದಿ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಇದೇಲ್ಲವನ್ನು ನೋಡಿದರೆ ಮಹಾರಾಷ್ಟ್ರ ಅರಾಜಕತೆಯತ್ತ ಸಾಗುತ್ತಿದೆ ಮತ್ತು ಜಾತಿ ಸಂಘರ್ಷಕ್ಕೆ ರಾಜ್ಯ ಬಲಿಯಾಗುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.