ಪತ್ರಕರ್ತರೊಬ್ಬರ ಮತ್ತು ಮಾಧ್ಯಮ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸಿದ್ದ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಪೀಠ, ಪ್ರಜಾಪ್ರಭುತ್ವದಲ್ಲಿ ನೀವು(ಅರ್ಜಿದಾರರು) ಸಹಿಸಿಕೊಳ್ಳುವುದಲ್ಲಿ ಕಲಿಯಬೇಕು. ಒಂದು ಹಗರಣದ ಬಗ್ಗೆ ವರದಿ ಮಾಡಬೇಕಾದರೆ ಕೆಲ ತಪ್ಪುಗಳು ನಡೆಯುತ್ತವೆ. ಆದರೂ ನಾವು ಮಾಧ್ಯಮಕ್ಕೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಬೇಕು ಎಂದಿದ್ದಾರೆ.