ನವದೆಹಲಿ: ದೆಹಲಿ ನಗರಾಡಳಿತ ಏಕೆ ಜನರಿಗೆ ಉಚಿತ ನೀರು ಹಾಗೂ ವಿದ್ಯುತ್ ಪೂರೈಸುತ್ತದೆ, ಮಾರಣಾಂತಿಕ ಏಡ್ಸ್ ರೋಗದಿಂದ ಪೀಡಿತರಾದ ಬಡವರಿಗೇಕೆ ಹಣಕಾಸು ನೆರವು ನೀಡುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಥಳೀಯ ಸರ್ಕಾರವನ್ನು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ದೆಹಲಿ ಸರಕಾರವನ್ನು ಈ ವಿಷಯದ ಮೇಲೆ ಪ್ರಶ್ನೆ ಮಾಡಿದೆ ಮತ್ತು "ನೀವೇನೂ ಮಾಡದೆ ಇದ್ದರೂ ಸಾಮಾಜ ಸೇವೆ ಮಾಡುವವರಂತೆ ನಟಿಸಬೇಡಿ" ಎಂದು ಪೀಠ ಸರ್ಕಾರಕ್ಕೆ ಛೀಮಾರಿ ಹಾಕಿದೆ.
"ಸಾಕಷ್ಟು ಆಸ್ತಿ ಹೊಂದಿದ ಜನರಿಗೂ ನೀವು ಉಚಿತ ನೀರು ಮತ್ತು ವಿದ್ಯುತ್ ನೀಡುತ್ತಿದ್ದೀರಿ .ಅವರು ಅವುಗಳ ಖರ್ಚು ನಿಭಾಯಿಸಬಲ್ಲದು ಮತ್ತು ಈ ಉಚಿತ ಕೊಡುಗೆ ಅವರಿಗೆ ಅಗತ್ಯವಿಲ್ಲ ವಾಸ್ತವಿಕ, ಸಮಂಜಸ ಯೋಜನೆಯಗಳಿಗೆ ಹಣ ತೊಡಗಿಸಿ" ಪೀಠ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏಡ್ಸ್ ನಿಂದ ಬಾಧಿತರಾದ ಓರ್ವ ವ್ಯಕ್ತಿ ತನ್ನ ಪಾಲಿನ ಸರ್ಕಾರಿ ಸಹಾಯಧನವನ್ನು 1,000 ರೂ. ನಿಂದ 3,000 ರೂ. ಗೆ ಹೆಚ್ಚಿಸಲು ಕೊರಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದು ಇದರ ವಿಚಾರಣೆ ಕೈಗೊಂಡ ನ್ಯಾಯಪೀಠವು ಮೇಲಿನಂತೆ ಪ್ರಶ್ನೆ ಮಾಡಿದೆ.